ವಿಠಲನ ದರ್ಶನಕ್ಕೆ ಹರಿದುಬಂದ ಜನ

0
69
ನಗರದ ಶ್ರೀ ರುಕ್ಮೀಣಿ ಪಾಮಡುರಂಗ ದೇವಸ್ಥಾನದಲ್ಲಿ ಶನಿವಾರ ಶ್ರೀ ವಿಠಲನ ದರ್ಶನ ಸರದಿಯಲ್ಲಿ ನಿಂತ ಜನರು

ಸುರಪುರ: ಆಷಾಢ ಏಕಾದಶಿಯ ನಿಮಿತ್ಯ ಶನಿವಾರ ನಗರದ ಐತಿಹಾಸಿಕ ದೇವಸ್ಥಾನವಾದ ಶ್ರೀ ರುಕ್ಮೀಣಿ ಪಾಂಡುರಂಗನ ದರ್ಶನ ಪಡೆಯಲು ನೂರಾರು ಜನರು ಬಂದು ದರ್ಶನ ಪಡೆದು ಪುನೀತರಾದರು.

ನಗರದ ಆಷಾಢ ಏಕಾದಶಿ ನಿಮಿತ್ಯ ದೇವರಿಗೆ ವಿಶೇಷ ಅಲಂಕಾರ ಆಭಿಶೇಕಾದಿ ಪೋಜಾ ಕಂಕೈರ್ಯಗಳು ನೇರವೇರಿಸಲಾಯಿತು. ಹಿಂದುಗಳ ಹಬ್ಬಗಳಲ್ಲಿ ಈ ಆಶಾಢ ಏಕಾದಶಿಯು ಮಹತ್ವದ ಹಬ್ಬವಾಗಿದೆ ಅಂದು ಶ್ರೀ ಪಾಂಡುರಂಗನ ನಾಮಸ್ಮರಣೆ ಮಾಡುವುದರಿಂದ ದೇವರು ಭವಸಾಗರವನ್ನು ದಾಟುವ ಶಕ್ತಿಯನ್ನು ದಯಪಾಲಿಸವನು ಎಂದು ದೇವಸ್ಥಾನದ ಅರ್ಚಕರಾದ ಗುರುರಾಜ ಆಚಾರ್ಯ ಅವರು ತಿಳಿಸಿದರು.

Contact Your\'s Advertisement; 9902492681

ಸಾಯಂಕಾಲ ಶ್ರೀ ವೇಣುಗೋಪಾಲ ಮಹಿಳಾ ಬಜನಾಮಂಡಳಿಯವರಿಂದ ಭಜನೆ ಕಾರ್ಯಕ್ರಮ ಮತ್ತು ಹರೇವೀಠಲ ಸೇವಾ ಸಮಿತಿಯ ಯುವಕರಿಂದ ದೇವರ ನಾಮಸ್ಮರಣೆ ಮತ್ತು ಸಂಕೀರ್ತನೆಗಳು ನೇರವೇರಿದವು ಹಾಗೂ ಏಕಾದಶಿಯ ನಿಮಿತ್ಯ ಜಾಗರಣೆಯಲ್ಲಿ ಶ್ರೀ ವೇಣುಗೋಪಾಲ ಭಜನಾ ಮಂಡಳಿಯವರಿಂದ ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ಭಜಸುವ ಮೂಲಕ ಶ್ರೀ ಪಾಂಡುರಂಗ ದೇವಸ್ಥಾನಕ್ಕೆ ಬಂದು ಭಜನೆ ಕಾರ್ಯಕ್ರಮಗಳು ನಡೆದವು.

ಹರೆವಿಠಲ ಸೇವಾ ಸಮಿತಿಯ ಅಧ್ಯಕ್ಷ ರವಿಕುಮಾರ ಗುತ್ತೆದಾರ,ಶ್ರೀಪಾದ ಗಡ್ಡದ್, ಪ್ರಕಾಶ ಕುಲ್ಕರ್ಣಿ, ದೇವಿದಾಸ ಭಟ್ ಗಡ್ಡದ್, ಪ್ರವೀಣ ಕುಲ್ಕರ್ಣೀ, ಸುರಜ್ ವರ್ಮಾ, ಮಿಥುನ ಬಾಡಿಹಾಳ, ಪವನ ವಿಶ್ವಕರ್ಮ, ಶ್ರೀಕರ ಐಜಿ, ಕೃಷ್ಣಾ ಪಾಟೀಲ, ರಾಘವೇಂದ್ರ ಗೋಡೆಕಾರ, ವಿಶಾಲ ಮಸ್ಕಿ, ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here