ಪ್ರಿಯಾಂಕ್ ಖರ್ಗೆ ಅವರು ನೇರ ನುಡಿಯ ವ್ಯಕ್ತಿತ್ವ ಹೊಂದಿದವರು- ಡಾ.ರಶೀದ್

0
48

ಶಹಾಬಾದ : ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಸೋಮವಾರ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿಕೊಂಡು ಕೇಕ್ ಕತ್ತರಿಸುವ ಮೂಲಕ
ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನವನ್ನು ಆಚರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ಪ್ರಿಯಾಂಕ್ ಖರ್ಗೆ ಅವರು ನೇರ ನುಡಿಯ ವ್ಯಕ್ತಿತ್ವ ಹೊಂದಿದವರು.ಯಾವತ್ತಿಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವನೆ ಹೊಂದಿದವರು. ಅತಿ ಹೆಚ್ಚು ಅನುದಾನವನ್ನು ತರುವ ಮೂಲಕ ಚಿತ್ತಾಪೂರ ತಾಲೂಕಿನ ಚಿತ್ರಣವನ್ನು ಬದಲಿಸಿದ ಹೆಮ್ಮ ನಮೆಲ್ಲರಿಗೂ ಇದೆ ಎಂದು ಹೇಳಿದರು.

Contact Your\'s Advertisement; 9902492681

ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ ಮಾತನಾಡಿ, ಪ್ರಿಯಾಂಕ್ ಖರ್ಗೆ ಎಂದರೆ ಅಭಿವೃದ್ಧಿ. ಅಭಿವೃದ್ಧಿ ಎಂದರೆ ಪ್ರಿಯಾಂಕ್. ಅವರು ಮಾಡಿದ ಅಭಿವೃದ್ಧಿ ಕಂಡು ಬಿಜೆಪಿಯವರಿಗೆ ಸಹಿಸಿಕೊಳ್ಳಲಾರದೇ, ಇಲ್ಲಸಲ್ಲದ ಆರೋಪ. ಟೀಕೆ ಮಾಡುತ್ತ ಹೊರಟಿದ್ದಾರೆ.

ಬಿಟ್ ಕಯಿನ್ ಹಗರಣದಲ್ಲಿ ಬಿಜೆಪಿಯವರೇ ಶಾಮೀಲಾಗಿರುವ ಕುರಿತು ಪತ್ರಿಕಾಗೋಷ್ಠಿ ನಡೆಸಿದನ್ನು ಅರಗಿಸಿಕೊಳ್ಳಲಾರದೇ, ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಸಂಸದ ಪ್ರತಾಪಸಿಂಗ ಟೀಕೆ ಮಾಡಿದ್ದು ನೋಡಿದರೇ ಸಿಂಹ ಅನಾಗರಿಕನೋ, ಅರೆ ಹುಚ್ಚನೋ ಗೊತ್ತಾಗುತ್ತಿಲ್ಲ.ಅವನೊಬ್ಬ ಸಂಸದನಾಗಿರುವುದಕ್ಕೆ ನಾಲಾಯಕ್ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ ಚವ್ಹಾಣ,ಡಾ.ಅಹ್ಮದ್ ಪಟೇಲ್, ಶಿವಕುಮಾರ ನಾಟೇಕಾರ, ಮಲ್ಕಣ್ಣ ಮುದ್ದಾ, ಶಂಕರ ಕುಸಾಳೆ, ಮಹ್ಮದ್ ಅಜರ್, ಭರತ್ ರಾಠೋಡ, ಮಹ್ಮದ್ ಜಾವೀದ್, ಮೇರಾಜ ಸಾಹೇಬ,ಸ್ನೇಹಲ್ ಜಾಯಿ, ಅವಿನಾಶ ಜಾಧವ, ನಾಗರಾಜ ಕರಣಿಕ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here