ಜೇವರ್ಗಿ – ರಾಜ್ಯದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ರೈತರು ಕಂಗಾಲಾಗಿ ಹೋಗಿದ್ದಾರೆ .
ಅದರಂತೆ ಜೇವರ್ಗಿ ತಾಲೂಕಿನ ಎಲ್ಲಾ ಹಳ್ಳಿಗಳ ಹೊಲಗಳಲ್ಲಿರು ತೊಗರಿಬೇಳೆ ಅತಿಯಾದ ಮಳೆಯಿಂದ ಸರ್ವನಾಶವಾಗಿದೆ. ಇದರ ಪರಿಣಾಮವಾಗಿ ತೊಗರಿ ಬೆಳೆಯನ್ನು ನಂಬಿಕೊಂಡು ರೈತರು ದಾರಿ ತೋಚದಂತೆ ಕುಳಿತಿದ್ದಾರೆ.
ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಅಳಿದುಳಿದ ತೊಗರಿಬೆಳೆ ಸಸ್ಯದಲ್ಲಿ ಉಳಿದ ಅಲ್ಲೊಂದು ಇಲ್ಲೊಂದು ಉಳಿದ ಕಾಯಿಗೆ ಕೀಟಗಳು ತಿನ್ನುತಿವೆ .ಔಷಧಿ ಸಿಂಪರಣೆ ಮಾಡಬೇಕು ಅಂದ್ರೆ ಮಳೆ ಬಿಡುವು ನೀಡುತ್ತಿಲ್ಲ.
ತಾಲೂಕಿನ ಮಾವನೂರ ಗ್ರಾಮದ ಭೀಮರಾಯಗೌಡ ಬಿರಾದಾರ ಎಂಬುವವರ 15 ಎಕರೆ ತೊಗರಿ ಬೆಳೆಯು ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಸಂಬಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಆಗಮಿಸಿ ಬೇಗನೆ ಪರಿಹಾರ ಕೊಡಿಸಬೇಕು ಎಂದು ರೈತರಾದ ಭೀಮರಾಯಗೌಡ ಮನವಿ ಮಾಡಿದ್ದಾರೆ.