ನಾಡೋಜ ಡಾ: ಮಹೇಶ ಜೋಷಿಗೆ ಸನ್ಮಾನ

0
62

ಬೆಂಗಳೂರು: ನೂತನವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ನಾಡೋಜ ಡಾ: ಮಹೇಶ ಜೋಷಿ ಅವರನ್ನು ಪರಿಷತ್ತಿನಲ್ಲಿ ಇಂದು (೩-೧೨-೨೦೨೧) ಕಲ್ಯಾಣ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಚಂದ್ರಕಾಂತ ಭಂಡಾರೆ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ ಸಾಹಿತಿಗಳಿಗೆ, ಚಿಂತಕರಿಗೆ, ಕಲಾವಿದರಿಗೆ ಪರಿಷತ್ತಿನ ರಾಜ್ಯ ಮಟ್ಟದ ಸಮಿತಿಗಳಲ್ಲಿ ಪ್ರಾಶಸ್ತ್ಯ ನೀಡಲು ಲಿಖಿತ ಮನವಿಯನ್ನು ಸಲ್ಲಿಸಲಾಯಿತು.

Contact Your\'s Advertisement; 9902492681

ನಿಯೋಗದಲ್ಲಿ ಡಾ: ಹನುಮಾಕ್ಷಿ ಗೋಗಿ ಮತ್ತು ಡಾ: ಎಸ್.ಕೆ.ಅರುಣಿ ಅವರು ಇದ್ದರು. ಅಧ್ಯಕ್ಷರು ಮನವಿಯನ್ನು ಸ್ವಿಕರಿಸಿ ಕಲ್ಯಾಣ ಕರ್ನಾಟಕದವರಿಗೆ ಖಂಡಿತ ಪ್ರಾಶಸ್ತ್ಯ ನೀಡುವುದಾಗಿ ನಿಯೋಗದವರಿಗೆ ಆಶ್ವಾಸನೆ ನೀಡಿದರು.

ಇದೇ ಸಂದರ್ಭದಲ್ಲಿ ರಂಗನಗೌಡ ಪಾಟೀಲ ಅವರ “ಸುರಪುರ ಒಂದು ಪ್ರಾಚೀನ ಬೇಡರ ರಾಜ್ಯ; ಡಾ: ಹನುಮಾಕ್ಷಿ ಅವರು ಬರೆದ “ಏವೂರು ಶಾಸನಗಳು: ಸಾಂಸ್ಕೃತಿಕ ಅಧ್ಯಯನ ” ಮತ್ತು “ಜಿನಸಮಯ’ ಹಾಗೂ ಎಸ್.ಕೆ. ಅರುಣಿ ಅವರ “ಮಧ್ಯಕಾಲೀನ ಕಲಬುರಗಿ” ಕೃತಿಗಳನ್ನು ಅಧ್ಯಕ್ಷರಿಗೆ ನೀಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here