ಕರ್ನಾಟಕ ರಕ್ಷಣಾ ವೇದಿಕೆ ದೇವರಗೋನಾಲ ಗ್ರಾಮ ಶಾಖೆ ರಚನೆ

0
19

ಸುರಪುರ:ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಸುರಪೂರ ಕಾರ್ಯಾಲಯದಲ್ಲಿ ದೇವರಗೋನಾಲ ಗ್ರಾಮಶಾಖೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲ್ಲೂಕ ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ ಮಾತನಾಡಿ ನೂತನ ಪದಾಧಿಕಾರಿಗಳು ಗ್ರಾಮದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಹೋರಾಟ ಮಾಡುವದು, ಕನ್ನಡ ನಾಡು ನುಡಿ ಗಡಿ ನೆಲ ಜಲ ಬಾಷೆಯ ವಿಚಾರದಲ್ಲಿ ಯಾವುದೇ ರಾಜಿಯಿಲ್ಲದೇ ನಿರಂತರ ಹೋರಾಟ ದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ವಿಶೇಷವಾಗಿ ಯುವಕರು ಹೆಚ್ಚು ಹೆಚ್ಚು ಕರವೇ ಸೇರುತ್ತಿರುವದು ಹೆಮ್ಮೆಯ ಸಂಗತಿ ತಾವು ಕೂಡ ಯುವಕರಾಗಿದ್ದು ಸಕ್ರಿಯರಾಗಿ ನಾಡ ಕಟ್ಟುವ ಕೆಲಸ ಮಾಡಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಭಾವಿ, ತಾಲ್ಲೂಕು ಉಪಾಧ್ಯಕ್ಷರಾದ ಶ್ರೀನಿವಾಸ ಭೈರಿಮಡ್ಡಿ, ಆನಂದ ಮಾಚಗುಂಡಾಳ, ಸಂಚಾಲಕರಾದ ಹಣಮಂತ ಹಾಲಗೇರಾ, ಯುವಘಟಕ ಅಧ್ಯಕ್ಷ ನಾಗರಾಜ ಡೊಣ್ಣಿಗೇರಿ, ನಗರಘಟಕ ದ ಅನಿಲ ಬಿರಾದಾರ್ವಿ,ವಿಧ್ಯಾರ್ಥಿ ಘಟಕದ ಆಂಜನೇಯ ದೇವರಗೋನಾಲ, ಉಪಸ್ಥಿತರಿದ್ದರು .

Contact Your\'s Advertisement; 9902492681

ನೂತನ ಪದಾಧಿಕಾರಿಗಳು: ಗೌರವಾಧ್ಯಕ್ಷ ಲಂಕೇಶ್ .ಎಸ್, ಅಧ್ಯಕ್ಷರು ವೆಂಕಟೇಶ.ಹೆಚ್. ಕುರಕುಂದಿ,ಉಪಾಧ್ಯಕ್ಷ ರು ಬಲಭೀಮ. ಎ.ಹೊಸಮನಿ ಹಾಗೂ ಅಂಬ್ಲಯ್ಯ. ಬಿ.ಕೋತಿಗುಡ್ಡ ,ಪ್ರಧಾನ ಕಾರ್ಯದರ್ಶಿ ಶಶಾಂಕ. ವಾಯ್. ದಳವಾಯಿ, ಸಹ ಕಾರ್ಯದರ್ಶಿ ಹಣಮಂತ್ರಾಯ. ಎಮ್. ಹೊಸಮನಿ,ಸಂಘಟನಾಕಾರ್ಯದರ್ಶಿ ಮಲ್ಲಿಕಾರ್ಜುನ. ಬಿ.ಕೊಂಗಂಡಿಕರ್,ಖಜಾಂಚಿ ಅಭಿಷೇಕ. ಎ.ದಿವಳಗುಡ್ಡ ಇವರನ್ನು ನೇಮಕ ಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here