ಸುರಪುರ ತಾಲೂಕು ಆಡಳಿತ ಅಂಬೇಡ್ಕರ್ ಸಂಸ್ಮರಣೆ ದಿನಾಚರಣೆ

0
11

ಸುರಪುರ: ಡಿಸೆಂಬರ್ ೬ರ ಸಂವಿಧಾನ ಶಿಲ್ಪಿ ಡಾ:ಬಾಬ ಸಾಹೇಬ್ ಅಂಬೇಡ್ಕರ್ ಅವರ ೬೫ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಸುರಪುರ ತಾಲೂಕು ಆಡಳಿತದಿಂದ ನಗರದ ಡಾ:ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂಸ್ಮರಣೆ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರರ ಮೂರ್ತಿಗೆ ತಹಸೀಲ್ದಾರ್ ಸುಬ್ಬಣ ಜಮಖಂಡಿ ಹಾಗು ಇತರೆ ಅಧಿಕಾರಿಗಳು ಮತ್ತು ಮುಖಂಡರು ಮಾಲಾರ್ಪಣೆ ಮಾಡಿದರು.ನಂತರ ಮೇಣದ ಬತ್ತಿ ಬೆಳಗಿ ೨ ನಿಮಿಷಗಳ ಮೌನಾಚರಣೆಯೊಂದಿಗೆ ಡಾ:ಬಿ.ಆರ್.ಅಂಬೇಡ್ಕರರಿಗೆ ಗೌರವ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ,ಮುಖಂಡರಾದ ವೇಣುಗೋಪಾಲ ನಾಯಕ ಜೇವರ್ಗಿ,ಮಾಳಪ್ಪ ಕಿರದಹಳ್ಳಿ,ರಮೇಶ ಅರಕೇರಿ,ಶೇಖರ ಜೀವಣಗಿ,ರಾಜು ಕಟ್ಟಿಮನಿ,ಮಲ್ಲು ಕೆಸಿಪಿ,ಶರಣು ತಳವಾರಗೇರಾ, ಮಹಾದೇವಪ್ಪ ಬೊಮ್ಮನಹಳ್ಳಿ,ಚಾಣಕ್ಕನವರ್,ಶಿವುಗೌಡ ಬಿರಾದಾರ್,ರಮೇಶ ಮುಂಡರಗಿ,ಸುನೀಲಕುಮಾರ ಪಂಚಾಂಗಮಠ,ಸೀತಾರಾಮ ನಾಯಕ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here