ಚಂದ್ಲಾಪುರ:ಮೂಲನಿವಾಸಿ ಅಂಬೇಡ್ಕರ್ ಸೇನೆ ಮಹಾಪರಿನಿರ್ವಾಣ ದಿನಾಚರಣೆ

0
15

ಸುರಪುರ: ತಾಲೂಕಿನ ಚಂದ್ಲಾಪುರ ಗ್ರಾಮದಲ್ಲಿ ಮೂಲನಿವಾಸಿ ಅಂಬೇಡ್ಕರ್ ಸೇನೆ ಸಂಘಟನೆಯಿಂದ ಡಾ:ಬಿ.ಆರ್.ಅಂಬೇಡ್ಕರರ ೬೫ನೇ ಮಹಾಪರಿರ್ವಾಣ ದಿನವನ್ನು ಆಚರಿಸಲಾಯಿತು.

ಗ್ರಾಮದಲ್ಲಿ ನವೀಕರಣಗೊಳಿಸಲಾದ ಡಾ:ಬಾಬಾ ಸಾಹೇಬ್‌ರ ನಾಮಫಲಕದ ಕಟ್ಟೆಯಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ರಾಹುಲ್ ಹುಲಿಮನಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ,ಡಾ:ಬಾಬಾ ಸಾಹೇಬರನ್ನು ನಡೆದಾಡುವ ವಿಶ್ವಕೋಶ ಎಂದು ಕರೆಯಲಾಗುತ್ತದೆ.ಅವರು ಸಂಪಾದಿಸಿದಷ್ಟು ಪದವಿಯನ್ನು ಯಾರೂ ಸಂಪಾದಿಸಿಲ್ಲ,ಅಂತಹ ಮಹಾನ್ ಚೇತನರು ನಮ್ಮನ್ನು ಅಗಲಿದ ಈ ದಿನದಲ್ಲಿ ನಾವೆಲ್ಲರು ಅವರ ಅನುಯಾಯಿಗಳಾಗಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡುವ ಮೂಲಕ ಈ ದಿನವನ್ನು ಸ್ಮರಣೆಯಾಗಿಸಬೇಕು ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಘಟನಾ ಸಂಚಾಲಕ ಹನುಮಂತ ರತ್ತಾಳ,ಶರಣು ಹೊಸ್ಮನಿ,ಮಹ್ಮದ್ ಗೌಸ್,ರವಿಚಂದ್ರ ರುಕ್ಮಾಪುರ,ಜಾವೀದ್ ಹಾಗು ಗ್ರಾಮಶಾಖೆ ಸಂಚಾಲಕ ಮಾನಪ್ಪ ಹೊಸ್ಮನಿ,ಶೇಖರ ಹಳಿಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here