ಕಲಬುರಗಿ: ನಾಡಿನ ಹೆಸರಾಂತ ಪ್ರವಚನಕಾರ, ಶರಣ ತತ್ವ ಪ್ರಚಾರಕ, ಶರಣ ಸಾಹಿತಿ ಡಾ ಈಶ್ವರ್ ಮಂಟೂರ್ ಅವರ ನಿಧನಕ್ಕೆ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ, ಬಿಜೆಪಿ ಪ್ರಮುಖರಾದ ರವಿ ಬಿರಾದಾರ, ಸಂಗಮೇಶ ನಾಗನಳ್ಳಿ, ರಾಜಕುಮಾರ ಕೋಟೆ, ಜಗದೀಶ ಪಾಟೀಲ ಸಣ್ಣೂರ, ಶಾಂತಕುಮಾರ ಪಾಟೀಲ ನಂದೂರ, ಸೇರಿದಂತೆ ಹಲವರು ಶೋಕ ವ್ಯಕ್ತ ಪಡಿಸಿದ್ದಾರೆ. ಮಂಟೂರ ಅವರ ಅಪಾರ ಅನೂಯಾಯಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಹಾಗೂ ಅಗಲಿದ ಮಹಾನ ಆತ್ಮಕ್ಕೆ ಬಸವಾದಿ ಶರಣರು ಸದ್ಗತಿ ಕರುಣಿಸಲೆಂದು ಪ್ರಾರ್ಥಿಸಿದ್ದಾರೆ.