ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಬೆಳೆಯಲಿ: ಬಾಲರಾಜ್ ಗುತ್ತೇದಾರ

0
30

ಸೇಡಂ: ಕರೋನಾ ಸಂಕಷ್ಟದ ಸಂದರ್ಭದಲ್ಲಿ ಬಡವರು ಅಸಾಹಯಕರು, ಅನಾಥರು ಅನ್ನ ನೀರಿಲ್ಲದೆ ಪರದಾಡುವಂತಾಗಿದೆ ಇಂತಹ ಸಂದರ್ಭದಲ್ಲಿ ಅವರಿಗೆ ಕೈಲಾದಷ್ಟು ಸೇವೆ ಮಾಡುವ ಮೂಲಕ ಅವರ ಕಷ್ಟದಲ್ಲಿ ಭಾಗಿಯಾಗಿ ಅತ್ಮತೃಪ್ತಿ ಪಡೆದುಕೋಳ್ಳುವ ಗುಣ ಬೆಳೆಸಿಕೊಳ್ಳೊಣ ಎಂದು ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಹೇಳಿದರು.

ಸೇಡಂ ಮತಕ್ಷೇತ್ರದ ಮಳಖೇಡ ಗ್ರಾಮದಲ್ಲಿ ಬಾಲರಾಜ ಬಿ ಗ್ರೇಡ್ ವತಿಯಿಂದ ಬಡಜನರಿಗೆ ಆಹಾರ ಪದಾರ್ಥದ ಕಿಟ್ ವಿತರಿಸಿ ಮಾತನಾಡಿ ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಜನರನ್ನು ಗುರುತಿಸಿ ಆಹಾರ ಪದಾರ್ಥ ವಿತರಿಸಲಾಗುತಿದೆ.ಕೊರೋನ ನೀಯಂತ್ರಣಕ್ಕಾಗಿ ಜಾರಿಗೆ ತಂದ ಲಾಕಡೌನ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಬಡವರು ಸಂಕಷ್ಟದಲ್ಲಿದ್ದಾರೆ. ಅವರಿಗೆ ವಿವಿಧ ರೀತಿಯಿಂದ ಸಹಾಯ ಮಾಡುವ ಕಾರ್ಯ ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಫೌಂಡೆಷನ್ ವತಿಯಿಂದ ನಡೆದಿದೆ ಪ್ರತಿ ಗ್ರಾಮದಲ್ಲಿ ಸ್ಯಾನಿಟೈಸರ್ ಮಾಡಲಾಗಿದೆ ಮತ್ತು ಆಹಾರ ಪದಾರ್ಥ ಕಿಟ್ ವಿತರಿಸಲಾಗುತಿದೆ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸೇಡಂ ಪುರಸಭೆ ಮಾಜಿ ಅಧ್ಯಕ್ಷ ಯಕ್ಬಾಲ್ ಖಾನ್ .ಜೆಡಿಎಸ್ ತಾಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ. ವಿಜಯಕುಮಾರ ಕುಲಕರ್ಣಿ. ಸಂತೋಷ ಕೇರೋಳ್ಳಿ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು

ಲಾಕ್ ಡೌನ್ ಇರುವ ಕಾರಣ ಬಹಳಷ್ಟು ಬಡವರು ಹಾಗೂ ನಿರ್ಗತಿಕರು ತುಂಬಾ ಸಂಕಷ್ಟದಲ್ಲಿದ್ದಾರೆ ಆದಕಾರಣ ಸೇಡಂ ಮತಕ್ಷೇತ್ರದಲ್ಲಿ 40 ಸಾವಿರಕ್ಕೂ ಅಧಿಕ ಆಹಾರ ಪದಾರ್ಥದ ಕಿಟ್ ಹಾಗೂ ಮಾಸ್ಕ್ ಸ್ಯಾನಿಟೈಸರ್ ವಿತರಿಸಲಾಗುತಿದೆ. -ಬಾಲರಾಜ ಗುತ್ತೇದಾರ, ಜೆಡಿಎಸ್ ಮಖಂಡರು ಸೇಡಂ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here