ಸುರಪುರ: ಬೋವಿಗಲ್ಲಿ ಸ್ಪೂರ್ತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಆಹಾರ ಮೇಳ

0
11

ಸುರಪುರ: ನಗರದ ಬೋವಿಗಲ್ಲಿ ಸ್ಪೂರ್ತಿ ಜ್ಞಾನ ವಿಕಾಸ ಕೇಂದ್ರ ಸಭೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯ ಸಹಯೋಗದಲ್ಲಿ ಆಹಾರ ಮೇಳ ಕಾರ್ಯಕ್ರಮ ನಡೆಸಲಾಯಿತು.ನಗರಸಭೆ ಸದಸ್ಯರಾದ ರೇಣುಕಾ ಅವರು ಜ್ಯೋತಿ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಸುಧಾ ಮಾತನಾಡಿ,ಜ್ಞಾನ ವಿಕಾಸ ಕಾರ್ಯಕ್ರಮದ ಆಶಯ,ಪೌಷ್ಠಿಕ ಆಹಾರ ಸೇವನೆಯ ಕ್ರಮಗಳ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿ ತಿಳಿಸಿಕೊಟ್ಟರು.

Contact Your\'s Advertisement; 9902492681

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಕಾಂತ ಮಾತನಾಡಿ,ಪೌಷ್ಠಿಕ ಆಹಾರ ಸೇವನೆ,ಶುದ್ಧ ಕುಡಿಯುವ ನೀರು,ಮೊಳಕೆ ಕಾಳು,ತರಕಾರಿ,ಹಣ್ಣು,ಹಾಲು ಸೇವನೆ,ಗರ್ಭೀಣಿ ಬಾಣಂತಿಯರ ಹಾರೈಕೆ,ಮಕ್ಕಳ ಪೋಷಣೆ, ಸಂಪೂರ್ಣ ಪೌಷ್ಠಿಕ ಆಹಾರ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ,ಸೇವಾಪ್ರತಿನಿಧಿ ಮತ್ತು ಕೇಂದ್ರದ ಸದಸ್ಯರು ಹಾಗು ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here