ಥ್ರೋಬಾಲ್ ಆಟದಲ್ಲಿ ಸಾಧನೆ ಮಾಡಿದ ಖಾಸಿಂ ಸಾಬ್‌ಗೆ ಅರ್ಷದ್ ದಖನಿ ಸನ್ಮಾನ

0
7

ಸುರಪುರ: ಥ್ರೋಬಾಲ್ ಆಟದಲ್ಲಿ ರಾಷ್ಟ್ರ ಮಟ್ಟಕ್ಕೆ ದ್ವೀತಿಯ ಸ್ಥಾನ ಪಡೆದ ತಾಲೂಕಿನ ದೇವಾಪುರ ಗ್ರಾಮ ಕ್ರೀಡಾಪಟು ಖಾಸಿಂ ಸಾಬ್ ರಾಜಾಸಾಬ್ ಇವರಿಗೆ ಟಿಪ್ಪು ಸುಲ್ತಾನ್ ಯುವಕ ಸಂಘದ ರಾಷ್ಟ್ರೀಯ ಅಧ್ಯಕ್ಷ ಹೋರಾಟಗಾರ ಅರ್ಷದ್ ದಖನಿ ಹಾಗು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಇವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಸುರಪುರ ಮಣ್ಣಿನ ಗುಣಧರ್ಮವೆ ಹಾಗಿದೆ ಇಲ್ಲಿ ಅನೇಕ ಜನ ಸಾಧಕರು ಹುಟ್ಟಿ ಜಗತ್ಪ್ರಿಸಿದ್ದವಾಗಿದ್ದಾರೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರು ಅಪ್ರತಿಮ ಹೋರಾಟಗಾರರಾಗಿದ್ದಾರೆ.ಅಂತಹ ಮಣ್ಣಿನಲ್ಲಿ ಜನಸಿರುವ ಖಾಸೀಂ ಸಾಬ್ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಹೆತ್ತವರ ಮತ್ತು ಕಲಿಸಿದ ಶಿಕ್ಷಕರ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಮೆರೆಸಿದ್ದಾನೆ ಜೊತೆಗೆ ತಾಲೂಕಿನ ಹೆಸರನ್ನು ದೇಶಕ್ಕೆ ಗುರುತಸಿದ್ದಾನೆ.

Contact Your\'s Advertisement; 9902492681

ಇಂತಹ ಯುವಕರು ಇನ್ನೂ ಹೆಚ್ಚೆಚ್ಚು ಬೆಳೆಯಬೇಕಿದೆ,ಅದಕ್ಕಾಗಿ ನಾವುಗಳು ಸಹಕಾರ ನೀಡುವೆವು ಅಲ್ಲದೆ ಸರಕಾರವೂ ಈ ಯುವನಿಗೆ ಇನ್ನೂ ಹೆಚ್ಚಿನ ನೆರವು ನೀಡಬೇಕೆಂದು ವಿನಂತಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಯುವಕನ ಪೋಷಕರು ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here