ಕನ್ನಡ ಜಾನಪದ ಪರಿಷತ್ ಉತ್ತರ ವಲಯದ ಪದಾಧಿಕಾರಿಗಳ ನೇಮಕ

0
35

ಕಲಬುರಗಿ: ನಗರದ ಕನ್ನಡ ಜಾನಪದ ಪರಿಷತ್ ಕಾರ್ಯಾಲಯದಲ್ಲಿ ಸದಸ್ಯರ ಸಭೆಯ ನಿರ್ಣಯದಂತೆ ಹಾಗೂ ರಾಜ್ಯ ಅಧ್ಯಕ್ಷರಾದ ಡಾ. ಎಸ್. ಬಾಲಾಜಿ ಅವರ ಅನುಮೋದನೆಯ ಮೇರೆಗೆ  ಕನ್ನಡ ಜಾನಪದ ಪರಿಷತ್ ಕಲಬುರಗಿ ತಾಲ್ಲೂಕಿನ ಉತ್ತರ ವಲಯದ  ಅಧ್ಯಕ್ಷರಾಗಿ ಜನಪರ ಹೋರಾಟಗಾರ,  ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಹಾಗೂ ಕಾರ್ಯದರ್ಶಿಯಾಗಿ ರವಿಕುಮಾರ ಶಹಾಪುರಕರ್, ಆಯ್ಕೆಯಾಗಿದ್ದಾರೆ.

ಇದೆ ಸಂದರ್ಭದಲ್ಲಿ ಸವ೯ ಪದಾಧಿಕಾರಿಗಳಾಗಿ ಕೆಳಗಿನಂತೆ ಆಯ್ಕೆ ಮಾಡಲಾಯಿತು. ರಘುನಂದನ ಕುಲಕರ್ಣಿ ಖಜಾಂಚಿ,  ಅಸ್ಲಂ ಶೇಖ ಜಂಟಿ ಕಾರ್ಯದರ್ಶಿ, ಶರಣಬಸಪ್ಪ ಜೆ. ಪಾಟೀಲ ಪತ್ರಿಕಾ ಕಾರ್ಯದರ್ಶಿ, ಸಂಗಮೇಶ ಶಾಸ್ತ್ರೀ  ಮಾಶಾಳ,  ಸಂಘಟನಾ ಕಾರ್ಯದರ್ಶಿ, ಮಲ್ಲಿನಾಥ ಕುಮಸಿ ಸಂಚಾಲಕರು ಹಾಗೂ ನೂತನ ಸದಸ್ಯರಾಗಿ ರಾಜು ಹೆಬ್ಬಾಳ, ಗೌಡೇಶ ಬಿರಾದಾರ, ವಸಂತಕುಮಾರ ಬಿ. ಮಂಗಲಗಿ, ಶ್ರವಣಕುಮಾರ ಮಠ, ಮಲಕಾರಿ ಪೂಜಾರಿ, ಮಹೇಶ ತೆಲೆಕುಣಿ, ಹಾಗೂ ಸಲಹಾ ಸಮಿತಿ ಸದಸ್ಯರಾಗಿ ನ್ಯಾಯವಾದಿ ಬಸವರಾಜ  ಕೋಬಾಳ, ಸಮಾಜ ಸೇವಕರಾದ ಸಂಜೀವಕುಮಾರ ಶೆಟ್ಟಿ ಆಯ್ಕೆಯಾಗಿದ್ದಾರೆ.

Contact Your\'s Advertisement; 9902492681

ನೂತನ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷರು ಪದಗ್ರಹಣ ಸಮಾರಂಭ ಇದೇ ತಿಂಗಳ 25 ರಂದು ಸಾಯಂಕಾಲ 5.30 ಗಂಟೆಗೆ  ನಗರದ ಕಲಾ ಮಂಡಳದಲ್ಲಿ ಹಮ್ಮಿಕೊಳ್ಳಲಾಗಿದೆ   ಎಂದು  ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾದ ಎಂ. ಬಿ. ನಿಂಗಪ್ಪ ಪತ್ರಿಕಾ ಪ್ರಕಟಣೆಯ ಮೂಲಕ  ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here