ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರವೇ ಸಂಘಟನೆ ಮನವಿ

0
11

ಸುರಪುರ:ನಗರದ ಪಾಳದಕೇರಿಯ ಆಶ್ರಯ ಕಾಲೋನಿಯಲ್ಲಿನ ರಸ್ತೆ ಬದಿಯಲ್ಲಿನ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ಸಂಘಟನೆಯಿಂದ ನಗರಸಭೆಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಶಿವಮೋನಯ್ಯ ಎಲ್.ಡಿ ನಾಯಕ ಮಾತನಾಡಿ,ಪಾಳದಕೇರಿಯಲ್ಲಿನ ಬಾಬು ಜಗಜೀವನರಾಂ ಅವರ ವೃತ್ತದಿಂದ ಶಾಲೆಯ ವರೆಗಿನ ರಸ್ತೆಯು ೨೦ ಫೀಟ್ ರಸ್ತೆ ಈಗ ೧೦ ಫೀಟ್ ಉಳಿದಿದೆ.ಆದ್ದರಿಂದ ಇಲ್ಲಿಯ ಜಾಗವನ್ನು ಒತ್ತುವಾರಿ ಮಾಡಿದ್ದನ್ನು ವಶಕ್ಕೆ ತೆಗೆದುಕೊಂಡು ಒತ್ತುವರಿ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ತರಕಾರಿ ಮಾರುಕಟ್ಟೆಯನ್ನು ಶೀಘ್ರದಲ್ಲಿ ಕಾಮಗಾರಿ ಮುಗಿಸಿ ವ್ಯಾಪಾರಸ್ಥರಿಗೆ ಒದಗಿಸಿಕೊಡಬೇಕು ಹಾಗು ಮಹಾತ್ಮ ಗಾಂಧಿ ವೃತ್ತದ ಛಾವಣಿ ಕಿತ್ತು ಹೋಗಿದ್ದು ಕೂಡಲೇ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರಸಭೆಗೆ ಪೌರಾಯುಕ್ತರಿಗೆ ಬರೆದ ಮನವಿಯನ್ನು ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸ,ಚನ್ನಪ್ಪ,ಗೋಪಾಲ,ಮಲ್ಲಪ್ಪ,ಭೀಮಪ್ಪ,ಭೀಮಾಶಂಕರ,ಮಂಜು,ಭೀಮರಾಯ,ಶಿವಪ್ಪ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here