“ಹರ್ ಗರ್ ಜಲ್” ಕಾಮಗಾರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ರೇವೂರ ಭೂಮಿ ಪೂಜೆ

0
17

ಕಲಬುರಗಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ  ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ತಾಲೂಕಿನ ನಂದಿಕೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗನಳ್ಳಿ ಗ್ರಾಮದಲ್ಲಿ ಜಲ ಜೀವನ್ ಮೀಷನ್ ಅಡಿಯಲ್ಲಿ “ಹರ್ ಗರ್ ಜಲ್” ಕಾಮಗಾರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ರವರು ಭಾನುವಾರ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ, ಸದಸ್ಯರಾದ ಭೀಮಾಶಂಕರ ನಾಗನಳ್ಳಿ, ಲಕ್ಷ್ಮಿಬಾಯಿ ಕುಪೇಂದ್ರ, ಭಾರತಿಬಾಯಿ ಶರಣಪ್ಪ, ಕಸ್ತೂರಿಬಾಯಿ ನಾಗೇಂದ್ರಪ್ಪ ಕರೆಕಲ್, ಮುಖಂಡರಾದ ರಾಜೇಂದ್ರ ಕರೆಕಲ್, ದಿನೇಶ ದೊಡ್ಡಮನಿ, ಸಂಗಮೇಶ ನಾಗನಳ್ಳಿ, ಶ್ರೀನಿವಾಸ ದೊಡ್ಡಮನಿ, ಅಶೋಕ ನಾಗನಳ್ಳಿ, ಚಂದ್ರು ನಾಗನಳ್ಳಿ, ನಾಗೇಂದ್ರಪ್ಪ ಶರ್ಮಾ, ನಾಗಲಿಂಗಯ್ಯಾ ಮಠಪತಿ, ಇಂಜಿನೀಯರ್ ರಮೇಶ ಹತ್ತಿ, ಪಿಡಿಓ ಸಂದೀಪ ಗುತ್ತೆದಾರ, ಕಾರ್ಯದರ್ಶಿ ಮಹಾನಂದಾ ಸಿಂಗೆ, ಗುತ್ತಿಗೆದಾರ ಬಿ.ಜಿ ಪಾಟೀಲ ಬಿರಾಳ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here