ಗೌಡ ಪ್ರಶಸ್ತಿ ಪುರಸ್ಕೃತರಾದ ಡಾ. ಅಹ್ಮದ ಪಟೇಲ್ ಸನ್ಮಾನ

0
18

ಶಹಾಬಾದ: ಗೌಡ ಪ್ರಶಸ್ತಿ ಪುರಸ್ಕೃತರಾದ ಡಾ. ಅಹ್ಮದ ಪಟೇಲ್ ಅವರಿಗೆ ನಗರದ ಓಂ ಪತ್ತಿನ ಸಹಕಾರ ಸಂಘ ನಿಯಮಿತ ಶಹಾಬಾದ ವತಿಯಿಂದ ಸನ್ಮಾನಿಸಲಾಯಿತು.

ಓಂ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷರಾದ ಶ್ರೀ ಬಸವರಾಜ ಮದ್ರಿಕಿ, ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ಎಸ್ ಇಬ್ರಾಹಿಂಪುರ್ ಮಾತನಾಡಿ, ಡಾ.ಅಹ್ಮದ್ ಪಟೇಲ್ ವೃತ್ತಿಯಿಂದ ವೈದ್ಯರಾಗಿದ್ದರೂ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ.ಬಡವರಿಗೆ ಯಾವುದೇ ಹಣ ಪಡೆಯದೇ ಉಚಿತ ಸೇವೆ ಸಲ್ಲಿಸುವ ಗುಣವನ್ನು ಗುರುತಿಸಿ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿದೆ.

Contact Your\'s Advertisement; 9902492681

ಈಗಾಗಲೇ ಒಂದು ಪ್ರಶಸ್ತಿಯನ್ನು ಪಡೆದುಕೊಂಡಿರುವ ಅವರಿಗೆ ಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.ಇದರಿಂದ ಅವರ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ.ಇನ್ನೂ ಅವರಿಂದ ಸಾಮಾಜಿಕ ಹಾಗೂ ಜನಪರವಾದ ಸೇವೆಗಳು ನಡೆಯಲಿ ಮತ್ತು ಅದರಿಂದ ಸಾರ್ವಜನಿಕರಿಗೆ, ಬಡವರಿಗೆ ಅನುಕೂಲವಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿಂಗಣ್ಣ ಸಂಗಾವಿಕರ್, ಇರ್ಫಾನ್ ಸರ್, ಅಂಬರೀಶ ಮಾವನೂರ, ಗ್ರಾಮ ಪಂಚಾಯತ ಸದಸ್ಯ ಬೆಳ್ಳೆಪ್ಪಾ ಖಣದಾಳ, ವಿಜಯಕುಮಾರ್ ಕಂಠಿಕಾರ ಹೊನಗುಂಟ, ಮಂಜುನಾಥ ಇಟಗಿ, ಮೌನೇಶ ಇಬ್ರಾಹಿಂಪುರ, ತೇಜಸ್ ಎಸ್, ಮಂಜುನಾಥ, ದೇವದಾಸ ಬಾಂಬೆ ಹಾಗು ಸಂಘದ ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here