ಬಸವಾದಿ ಶರಣರ ಸಾಮಾಜಕ ಸಾಮರಸ್ಯದ ಬೃಹತ್‌ ಸಮಾವೇಶ ಪೂರ್ವಸಿದ್ಧತಾ ಸಭೆ 31ಕ್ಕೆ

0
8

ಕಲಬುರಗಿ: 2022ನೇ ಜನೇವರಿ 30ನೇ ತಾರೀಖಿನಂದು ಪೂಜ್ಯರ ‘ಶಿವಯೋಗ’ ಅನುಷ್ಠಾನದ ಅಂತಿಮ ದಿನವಾಗಿರುವದರಿಂದ ಆ ದಿನವನ್ನು ಸಾಮಾಜಿಕ ಸಾಮರಸ್ಯದ ದಿನವನ್ನಾಗಿ ಆಚರಿಸುವ ಮುಖಾಂತರ, ಸಂದೇಶ ನೀಡಲು ಬಸವಕಲ್ಯಾಣದ ಬಸವ ಮಹಾಮನೆ ಸಂಸ್ಥೆ, ಮತು ‘ ಕಲ್ಯಾಣ ನಾಡಿನ ಸಮಾನ ಮನಸ್ಕರ ವೇದಿಕೆ ನಿರ್ಧರಿಸಿದೆ ಎಂದು ಬಸವ ಮಹಾಮನೆ ಸಂಚಾಲಕರಾದ ಶಾಮರಾವ ಪ್ಯಾಟಿ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಸಾಮಾಜಿಕ ಸಾಮರಸ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲು ಪೂರ್ವಸಿದ್ಧತಾ ಸಭೆಯನ್ನು ಬಸವಕಲ್ಯಾಣ ಶಾಸಕರಾದ ಶರಣರಾದ ಶರಣು ಸಲಗರ ಅವರ ಅಧ್ಯಕ್ಷತೆಯಲ್ಲಿ ಕಲ್ಯಾಣ ನಾಡಿನ ಕಲಬುರಗಿ, ಬಸವಕಲ್ಯಾಣ, ಬೀದರಿನ ಪೂಜ್ಯರ, ಆಯಾ ಕ್ಷೇತ್ರದ ಗಣ್ಯರ, ಸಮಾನ ಮನಸ್ಕರ ಸಭೆಯನ್ನು ಬರುವ 31 ರಂದು ಶುಕ್ರವಾರ ಮಧ್ಯಾಹ್ನ 1:30 ಗಂಟೆಗೆ ಬಸವಕಲ್ಯಾಣ ನಗರದ ಬಸವ ಮಹಾಮನೆ ಸಂಸ್ಥೆಯ ಸಭಾಂಗಣದಲ್ಲಿ ನಿಯೋಜಿಸಲಾಗಿದೆ.

Contact Your\'s Advertisement; 9902492681

ಈ ಮಹತ್ವದ ಸಭೆಗೆ ಬಸವಾಭಿಮಾನಿಗಳು, ಪ್ರಗತಿಪರರು ತಪ್ಪದೇ ಹಾಜರಾಗಬೇಕೆಂದು ಎಂದು ಸಂಚಾಲಕರಾದ ಶಾಮರಾವ ಪ್ಯಾಟ, ಸಹ ಸಂಚಾಲಕರಾದ ಶರಣು ಮೋದಿ, ಶಾಮ್‌ ನಾಟಿಕಾರ, ಮನೀಷ್‌ ಜಾಜು, ಶಿವಕುಮಾರ ಬಿ. ರಘುನಾಥರಾವ, ಅನಂತತೆಡ್ಡಿ, ಗುರುಸಿದ್ಧಪ್ಪ, ಜ್ಞಾನಮಿತ್ರ ಸ್ಥಾಮ್ಯೂವೆಲ್‌, ಡಾ. ಭದ್ರಕೆಟ್ಟಿ ಲಿಂಗರಾಜ ಸಿರಗಾಪೂರ, ಜೈಯರಾಜ ಚವ್ಹಾಣ, ಹಿಂತು ಪಸ್ತಾಪೂರ, ಶಿವಲಿಂಗಪ್ಪ ಬಂಡಕ್‌ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ವಿಶ್ವಕ್ಕೆ ಮೊದಲನೆಯ ಪಾರ್ಲಿಮೆಂಟ ನೀಡಿದ ಬಸವಾದಿ ಶರಣರ ಸಾಮಾಜಿಕ ಸಾಮರಸ್ಯದ ಸದ್ಧಾಂತದಂತ ನದ ಜೀವನದಲ್ಲಿ ಅಳವಡಿಸಿಕೊಂಡು, ಕಲ್ಯಾಣ ಕರ್ನಾಟಕದ ಮಹಾನ್‌ ಪೂಜ್ಯರಾದ ಶ್ರೀ ಕ್ಷೇತ್ರ ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದೇವರು ದಿವ್ಯ ಮಾರ್ಗದರ್ಶನದಂತೆ ನಡೆದುಕೊಂಡು ಬಸವಾದಿ ಶರಣರ ಮಾನವೀಯ ಮೌಲ್ಯಗಳನ್ನು ಮುಂದಿಟ್ಟುಕೊಂಡು ಸರ್ವರಿಗೂ ಸಮಾನ ಶಿಕ್ಷಣ, ಸರ್ವಜನಾಂಗದಲ್ಲಿ ಸಾಮಾಜಿಕ ಸಾಮರಸ್ಯದ ಬಸವಾದಿ ಶರಣರ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಸುಮಾರು ಐದು ದಶಕಗಳಿಂದ “ಜನಮಾನಸದಲ್ಲಿ”ಸಾಮಾನ್ಯ ಶರಣರಂತೆ ಬೆರೆತು ಮಹಾನ್‌ ತರಣರಾ ಗಿರುವ ದ ಸಿದ್ದರಾಮ ಶರಣರು ದೇಶ, ಸಮಾಜಕ್ಕೆ ಸಾಮಾಜಿಕ ಸಾಮರಸ್ಯದ ದಿವ್ಯ ಸ್ವರೂಪಿಯಾಗಿ ನಡೆದಾರ ದೀವರಾಗಿದ್ದಾರೆ.

ಸಕಲ ಜೀವಾತ್ಮಕ್ಕಿ ಲೇಸನ್ನೇ ಬಯಸಿದ” ಬಸವಣ್ಣನವರ ನಡೆ-ನುಡಿ ಆಚರಣೆಯಲ್ಲಿ ತರುವುದರ ಮೂಲಕ, ಸುಮಾರು 73 ವರ್ಷಗಳು ಗತಿಸಿದರೂ ಸಹ ನಿರಂತರ ಶಿವಯೋಗ ಮಾಡುತ್ತಾ ಬರುತ್ತಿರುವ ಪುಜ್ಯರು ಪ್ರಸ್ತುತ ನವ್ಹೆಂಬರ ತಿಂಗಳಿನಿಂದ “ಶಿವಯೋಗದಲಿ’ ತೊಡಗಿಸಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here