ಕಸಾಪ ಅಧ್ಯಕ್ಷ ತೇಗಲತಿಪ್ಪಿಅವರಿಂದ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಜಿಗೆ ಸನ್ಮಾನ

0
11

ಕಲಬುರಗಿ: ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಮನುಷ್ಯರ ಜವಾಬ್ದಾರಿಗಳನ್ನು ಪುನರ್ಜ್ಞಾನಿಪಿಸುವ ಮತ್ತು ಆ ಮೂಲಕ ಮಾನವ ಬಂಧುತ್ವವನ್ನು ಏರ್ಪಡಿಸುವ ಆಶಯದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ಕಾರ್ಯ ಮಾಡಲಿದೆ. ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳು ಜಟಿಲವೆನಿಸಿದಾಗ, ಕುಟಿಲವೆನಿಸಿದಾಗ ಸರ್ವ ಜನಾಂಗದ ಲೇಸನ್ನೇ ಬಯಸಿದ ಹನ್ನೇರಡನೆಯ ಶತಮಾನದ ಬಸವಾದಿ ಶರಣರ ವಚನಗಳು ಆತ್ಮಾವಲೋಕನದಂತೆ ಪುನರಾವಲೋಕನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಒಂದು ದಿನದ ವೈಚಾರಿಕ ಚಿಂತನಾ ಸಮಾವೇಶವೊಂದನ್ನು ಜನವರಿ ಅಂತ್ಯಕ್ಕೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ನಗರದ ಕನ್ನಡ ಭವನಕ್ಕೆ ಭೆಟ್ಟಿ ನೀಡಿದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳವರಿಂದ ಜಿಲ್ಲಾ ಕಸಾಪ ಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ವಿಶೇಷ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಬುದ್ಧ, ಬಸವ, ಡಾ.ಅಂಬೇಡ್ಕರ್ ಅವರ ಚಿಂತನೆಗಳ ಅಕ್ಷರಶ: ಪಾಲನೆ ಅನಿವಾರ್ಯ ಎಂಬುದನ್ನು ಅರ್ಥ ಮಾಡಿಕೊಂಡು ಪರಿಷತ್ತಿನ ವತಿಯಿಂದ ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಅಯೋಜಿಸಲಾಗುವುದೆಂದು ಹೇಳಿದರು.

Contact Your\'s Advertisement; 9902492681

ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು, ಸಮ ಸಮಜ ನಿರ್ಮಾಣ ಮಾಡುವಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಪಾತ್ರ ಹೆಚ್ಚು ಇದೆ. ಬುದ್ಧನ ಚಿಂತನೆ, ಬಸವಣ್ಣನವರ ವೈಚಾರಿಕತೆ, ಡಾ.ಅಂಬೇಡ್ಕರ್ ಅವರ ಕಾನೂನಿನ ಮೂಲಕ ನಡೆಸಿರುವ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಂಡರೆ ಏನು ಬೇಕಾದರೂ ಸಾದಿಸಬಹುದು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ರಾಜ್ಯಕ್ಕೆ ಮಾದರಿಯಾಗುವ ದಿಸೆಯಲ್ಲಿ ನಡೆಸಲಿ ಎಂದು ನುಡಿದರು.

ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಾ.ಶರಣರಾಜ್ ಛಪ್ಪರಬಂದಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಾ.ಅರುಣಕುಮಾರ ಎಸ್.ಪಾಟೀಲ, ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ, ಪ್ರಮುಖರಾದ  ಸಂತೋಷ ಕುಡಳ್ಳಿ ಕಾಳಗಿ, ಪ್ರಭು ಫುಲಾರಿ ಕರ್ಜಗಿ, ಸುರೇಶ ದೇಶಪಾಂಡೆ ಚಿಂಚೊಳಿ, ಎಸ್.ಕೆ.ಬಿರಾದಾರ ಜೇವರ್ಗಿ, ವೀರೇಂದ್ರ ಕೊಲ್ಲೂರ, ಶಿವರಜ್ ವಾಲಿ, ಶರಣಬಸಪ್ಪ ನರೂಣಿ, ರಾಜೇಂದ್ರ ಮಾಡಬೂಳಕರ್, ವಿಶ್ವನಾಥ ತೊಟ್ನಳ್ಳಿ, ಮಂಜುನಾಥ ಕಂಬಾಳಿಮಠ, ಹೆಚ್.ಎಸ್.ಬರಗಾಲಿ ಕುಸನೂರ, ಶಿವಶಂಕರ ವರ್ಮಾ, ಬಿ.ಎಂ.ಪಾಟೀಲ ಕಲ್ಲೂರ, ರವೀಂದ್ರಕುಮಾರ ಭಂಟನಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here