ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀ ಮಡಿವಾಳೆಶ್ವರ ಸ್ವಾಮಿಗಳ ಪುರಾಣ

0
116
ವಿದ್ಯಾನಗರ ವೆಲಫೆರ ಸೊಸೈಟಿ ವತಿಯಿಂದ ಗರಗದ ಶ್ರೀಮಡಿವಾಳೇಶ್ವರ ಪುರಾಣ ಪ್ರವಚನ ಮಾಡಲು ಗೋಳಾ ಬಿ. ಹಾಗೂ ನರೋಳದ ಪೂಜ್ಯ ಚನ್ನಮಲ್ಲ ಸ್ವಾಮಿಗಳವರಿಗೆ ಅಧಿಕೃತ ಆಹ್ವಾನ ನೀಡಿ ಸನ್ಮಾನಿಸುತ್ತಿರುವ ಚಿತ್ರ. ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ಪದಾಧಿಕಾರಿಗಳಾದ ಬಸವಂತರಾವ ಜಾಬಶೆಟ್ಟಿ ಮಲ್ಲಿಕಾರ್ಜುನ ನಾಗಶೆಟ್ಟಿ ಕಾಶಿನಾಥ ಚಿನ್ಮಳ್ಳಿ, ಸುಭಾಷ ಮಂಠಾಳೆ, ಗುರುಲಿಂಗಯ್ಯ ಮಠಪತಿ  ಡಾ.ಸಂತೋಷ ಪಾಟೀಲ ಉಪಸ್ಥಿತರಿದ್ದರು.

ಕಲಬುರಗಿ:  ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆ ಇರುವ ವಿದ್ಯಾನಗರ ಕಾಲೋನಿಯ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿದ್ಯಾನಗರ ವೆಲಫೆರ ಸೊಸೈಟಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ನಿಮಿತ್ಯ ಪುರಾಣ  ಆಗಸ್ಟ ೨ ರಿಂದ ೧ ತಿಂಗಳ ಪರ್ಯಂತ ಧಾರವಾಡ ಜಿಲ್ಲೆಯ ಗರಗದ ಶ್ರೀಮಡಿವಾಳೇಶ್ವರ ಸ್ವಾಮಿಗಳ ಪುರಾಣ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾನಗರ ವೆಲಫೆರ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿಯಾ ಶೀಲತೆಯಿಂದ ಸಾತ್ವಿಕತೆಯಿಂದ ಸಹಜತೆಯಿಂದ ಲಿಂಗ ಪೂಜೆ ಮೂಲಕ ಸಮಾಜದ ಜನರಿಗೆ ಸಂಸ್ಕಾರವನ್ನು ಕೊಟ್ಟು ಮನುಕುಲದ ಮಂದಾರವಾಗಿದ್ದಾರೆ. ಬನ್ನಿ ಇಂತಹ ಪೂಜ್ಯರ ವಾಣಿಯಿಂದ ಜರುಗುವ ಪುರಾಣ ಕಾರ್ಯಕ್ರಮವನ್ನು ಆಲಿಸಿ. ಸಾಕ್ಷಿಭೂತರಾಗೊಣ ಹಾಗೂ ಶ್ರೀ ಗರಗದ ಮಡಿವಾಳೇಶ್ವರ ಸ್ವಾಮಿಗಳ ಪುರಾಣ ಯಶಸ್ವಿಗೊಳಿಸೊಣ.

Contact Your\'s Advertisement; 9902492681

ವಿದ್ಯಾನಗರ ವೆಲಫೆರ ಸೊಸೈಟಿ ಅಧ್ಯಕ್ಷರಾದ ಶ್ರೀಮಲ್ಲಿನಾಥ ದೇಶಮುಖ ಪುರಾಣಿಕರಿಗೆ ಅಧಿಕೃತ ಆಹ್ವಾನ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸೊಸೈಟಿ ಪದಾಧಿಕಾರಿ ಬಸವಂತರಾವ ಜಾಬಶೆಟ್ಟಿ ಮಲ್ಲಿಕಾರ್ಜುನ ನಾಗಶೆಟ್ಟಿ ಕಾಶಿನಾಥ ಚಿನ್ಮಳ್ಳಿ, ಸುಭಾಷ ಮಂಠಾಳೆ, ಗುರುಲಿಂಗಯ್ಯ ಮಠಪತಿ  ಡಾ.ಸಂತೋಷ ಪಾಟೀಲ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here