ನಟ ಪುನೀತ್ ಸಮಾಧಿಗೆ ಪಾದಯಾತ್ರೆ ಹೊರಟ ಅಂಗವಿಕಲ ರವಿಕುಮಾರ ಕುಂಬಾರ

0
10

ಸುರಪುರ: ದಿವ್ಯಂಗತ ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬ ಬೆಂಗಳೂರಿನಲ್ಲಿರುವ ಪುನೀತ್ ರಾಜಕುಮಾರ್ ಸಮಾಧಿ ವರೆಗೆ ಪಾದಯಾತ್ರೆ ಮಾಡಿ ಅಪ್ಪು ಸಮಾಧಿ ದರ್ಶನಕ್ಕೆ ಹೊರಟಿದ್ದಾನೆ.

ಶಹಾಪುರ ತಾಲೂಕಿನ ಐಕೂರು ಗ್ರಾiದ ಅಂಗವಿಕಲ ಯುವಕ ರವಿಕುಮಾರ್ ಮಹಾದೇವಪ್ಪ ಕುಂಬಾರ ಎನ್ನುವ ಯುವಕ ನಟ ಪುನೀತ್ ರಾಜಕುಮಾರ್ ಎಂದರೆ ಎಲ್ಲಿಲ್ಲದ ಅಭಿಮಾನ.ಬದುಕಿರುವಾಗ ಅವರನ್ನು ಭೇಟಿ ಮಾಡಬೇಕೆಂದರೆ ಆಗಲಿಲ್ಲ,ಆದರೆ ಈಗ ಅವರಿಲ್ಲದಿದ್ದರೂ ಅವರ ಸಮಾಧಿ ದರ್ಶನವನ್ನು ಪಾದಯಾತ್ರೆ ಮೂಲಕ ಹೋಗಿ ಮಾಡಬೇಕೆಂಬ ಆಸೆಯಿಂದು ಬುಧವಾರ ಬೆಳಿಗ್ಗೆಯೆ ಮನೆಯಿಂದ ಪಾದಯಾತ್ರೆ ಆರಂಭಿಸಿದ್ದಾನೆ.ತಾನೊಬ್ಬ ಅಂಗವಿಕಲನಾಗಿದ್ದರು,ಬೆಂಗಳೂರಿನ ವರೆಗೂ ನಡೆದುಕೊಂಡೇ ಹೋಗಬೇಕೆಂಬ ಮಹದಾಸೆಯಿಂದ ಹೊರಟಿದ್ದು.ಮನೆಯಲ್ಲಿ ತಂದೆಗೂ ಯಾವುದೇ ವಿಷಯ ಹೇಳದೆ ಹೊರಟಿದ್ದಾನೆ.

Contact Your\'s Advertisement; 9902492681

ಈ ಕುರಿತು ಮಾತನಾಡಿ,ನಾನು ಅಪ್ಪು ಸರನ್ನು ನೊಡಬೇಕೆಂದು ಪ್ರಯತ್ನ ಮಾಡಿದರು ಆಗಲಿಲ್ಲ ಆದರೆ ಈಗ ಅವರಿಲ್ಲ ಎನ್ನುವ ನೋವು ತುಂಬಾ ಇದೆ.ಆದರೂ ಅವರನ್ನು ನೋಡು ಆಸೆಯಿಂದ ಈಗ ಅವರ ಸಮಾಧಿ ದರ್ಶನವನ್ನು ಮಾಡುವ ಮೂಲಕ ಅವರನ್ನು ಕಾಣುವೆ ಎಂದು ಹೋರಟಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸುರಪುರ ನಗರಕ್ಕೆ ಪ್ರವೇಶಿಸುತ್ತಿದ್ದಂತೆ ನಗರದ ಹಸನಾಪುರ ಪೆಟ್ರೋಲ್ ಬಂಕ್,ತಿಮ್ಮಾಪುರ ಮತ್ತು ಸುರಪುರದಲ್ಲಿ ಜಯಕರ್ನಾಟಕ ಸಂಘಟನೆಯಿಂದ ರವಿಕುಮಾರ್‌ನನ್ನು ಸನ್ಮಾನಿಸಿ ಗೌರವಿಸುವ ಮೂಲಕ ಪ್ರಯಾಣಕ್ಕೆ ಶುಭ ಹಾರೈಸಿ ಬೀಳ್ಕೊಟ್ಟರು.ಈ ಸಂದರ್ಭದಲ್ಲಿ ಜಯಕರ್ನಾಟಕ ತಾಲೂಕು ಅಧ್ಯಕ್ಷ ರವಿಕುಮಾರ ನಾಯಕ ಬೈರಿಮಡ್ಡಿ,ಜಿಲ್ಲಾ ಉಪಾಧ್ಯಕ್ಷ ಶರಣು ಬೈರಿಮಡ್ಡಿ,ತಾ.ಕಾರ್ಯದರ್ಶಿ ಯಲ್ಲಪ್ಪ ಕಬಾಡಗೇರಾ,ಯಲ್ಲಪ್ಪ ಶಿಬಾರಬಂಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here