ಧಾರ್ಮಿಕ ವಿಧೇಯಕ ಕಾನೂನು ವಾಪಸಿಗೆ ಒತ್ತಾಯಿಸಿ ಪ್ರತಿಭಟನೆ

0
4

ಆಳಂದ: ಮತಾಂಧ ಹಾಗೂ ಜಾತಿವಾದಿ ಪುಂಡಾಟಿಕೆಗೆ ನೆರವಾಗುವ ವಂಚಕ ಜಾತಿಪದ್ಧತಿಯನ್ನು ಮುಂದುವರೆಸಲಿರುವ ಸಂವಿಧಾನ ವಿರೋಧಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ವಿಧೇಯಕ ವಾಪಸು ಪಡೆಯಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದ), ತಾಲೂಕು ಘಟಕದ ಕಾರ‍್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಂಡಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾಅ ವಿಧೇಯಕ ೨೦೨೧ ಕಾನೂನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ತಾಲೂಕು ಕಾರ‍್ಯದರ್ಶಿ ಪಾಂಡುರಂಗ ಮಾವೀನಕರ್, ಸದಸ್ಯ ಪ್ರಕಾಶ ಜಾನಿ, ಫಯಾಜ್ ಪಟೇಲ್, ಬಸವರಾಜ ಗಡಲಗಿಕರ್, ಭಾಗಣ್ಣಾ ದೇವನೂರ, ನಾಗರತ್ನಾ ಶಿವರಾಜ ಮತ್ತಿತರು ಪಾಲ್ಗೊಂಡು ತಹಸೀಲ್ದಾರ ಪರ ಶಿರಸ್ತೆದಾರ ರಾಕೇಶ ಶೀಲವಂತ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here