ಬಾದಾಮಿ: ಬಾದಾಮಿ ಬನಶಂಕರಿದೇವಿ ಮಹಾರಥೋತ್ಸವದ ದಿನ ಸೋಮವಾರ ಬೆಳಗ್ಗೆಯಿಂದ ಜಿಲ್ಲೆಯ, ತಾಲೂಕಿನ ವಿವಿಧ ಭಾಗಗಳಿಂದ ಸಹಸ್ರಾರು ಜನ ಭಕ್ತ ಸಮೂಹ ಪಾದಯಾತ್ರೆ ಮೂಲಕ ಬನಶಂಕರಿಗೆ ಆಗಮಿಸಿದ್ದರು. ಮಹಾರಥೋತ್ಸವ ಸಂದರ್ಭದಲ್ಲಿ ದಿ. ಪುನೀತ್ರಾಜಕುಮಾರ ಅಭಿಮಾನಿಗಳು ಪುನೀತ್ ಭಾವಚಿತ್ರ ಹಿಡಿದು ಘೋಷಣೆ ಕೂಗಿದರು.
ಮಹಾ ರಥೋತ್ಸವದಲ್ಲಿ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಮುಖಂಡರಾದ ಎಂ.ಬಿ.ಹಂಗರಗಿ, ಭೀಮಸೇನ ಚಿಮ್ಮನಕಟ್ಟಿ, ಮಂಜುನಾಥ ಹೊಸಮನಿ, ಮಹೇಶ ಹೊಸಗೌಡ್ರ, ಹೊಳಬಸು ಶೆಟ್ಟರ, ರಾಜಮಹ್ಮದ ಬಾಗವಾನ, ಪಿ.ಆರ್.ಗೌಡರ, ರೇವಣಸಿದ್ದಪ್ಪ ನೋಟಗಾರ, ರಾಮವ್ವ ಮಾದರ, ಎಂ.ಡಿ.ಯಲಿಗಾರ, ಅಶೋಕ ಕೋಟನಕರ, ತಹಶೀಲ್ದಾರ್ ಸುಹಾಸ ಇಂಗಳೆ, ತಾಪಂ ಇಒ ಮಲ್ಲಿಕಾರ್ಜುನ ಕಲಾದಗಿ, ಚೊಳಚಗುಡ್ಡ ಗ್ರಾಪಂ ಅಧ್ಯಕ್ಷೆ ರತ್ನಾ ಹಂಪಿಹೊಳಿ, ಉಪಾಧ್ಯಕ್ಷ ಭರಮಗೌಡ ಪಾಟೀಲ, ಬಸವರಾಜ ಹಂಪಿಹೊಳಿ, ಪಿಡಿಒ ಚಂದ್ರಕಾಂತ ದೊಡ್ಡಪತ್ತಾರ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭಾಗವಹಿಸಿದ್ದರು.