ಡಾ. ಶಿವರಾಜ ಶಾಸ್ತ್ರಿ ಹೇರೂರ ರಚಿಸಿದ ”ಗೀಗೀಪದಾಮೃತ” ಪುಸ್ತಕ ಬಿಡುಗಡೆ

0
15

ಕಲಬುರಗಿ; ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಿಲಿಟ್ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಜ ಶಾಸ್ತ್ರಿ ಹೇರೂರ ಬರೆದಿರುವ ”ಗೀಗೀಪದಾಮೃತ” ಪುಸ್ತಕವು ದಿನಾಂಕ ೧೮-೧-೨೦೨೨ರಂದು ಮಂಗಳವಾರ ಲೋಕಾರ್ಪಣೆಗೊಂಡಿತು.

ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೋ. ಎಚ್.ಟಿ. ಪೋತೆಯವರು ಗ್ರಂಥ ಲೋಕಾರ್ಪಣೆ ಮಾಡಿದರು.

Contact Your\'s Advertisement; 9902492681

ಡಾ. ಶಿವರಾಜ ಶಾಸ್ತ್ರಿ ಯವರು ರಚಿಸಿರುವ ’ಗೀಗೀಪದಾಮೃತ’ ಎಂಬ ಪುಸ್ತಕವು ಅನೇಕ ಶ್ರೇಷ್ಠ ಮಟ್ಟದ ಮೌಲ್ಯಗಳಿಂದ ಕೂಡಿದ್ದು, ಶರಣಬಸವೇಶ್ವರ ಮಹಾದಾಸೋಹ ಯಾತ್ರಾ ಮಹೋತ್ಸವದ ಸಂದರ್ಭದಲ್ಲಿ ಜರುಗುವ ಮೂರು ದಿನಗಳ ಗೀಗೀ ಸಮ್ಮೇಳನದಲ್ಲಿ ಖ್ಯಾತ ಗೀಗೀ ಪದ ಕಲಾವಿದರು ಹಾಡಿರುವ ಶಿವಶರಣರ/ಶಿವಶರಣೆಯರ ಸಂತ ಮಹಾತ್ಮರ ಭಕ್ತಿ ಭರಿತ ಪಾವನ ಚರಿತ್ರೆಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಹಾಗೂ ವ್ಯಾಖ್ಯಾನಿಸಿ ಡಾ. ಶಾಸ್ತ್ರಿ ಅವರು ಅಮೂಲ್ಯ ಕೃತಿ ರಚಿಸಿರುವರು. ಇದೊಂದು ವಿಶೇಷ ಪುಸ್ತಕವಾಗಿದ್ದು ಹೊಸಗನ್ನಡ ಸಾಹಿತ್ಯ ಲೋಕಕ್ಕೆ ಈ ಕೃತಿ ೨೦೨೨ನೇ ಸಾಲಿನ ಪ್ರಥಮ ತಿಂಗಳಿನಲ್ಲಿಯೇ ಲೋಕಾರ್ಪಣೆಯಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.

ಈ ಸಮಾರಂಭದಲ್ಲಿ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸುರೇಶಕುಮಾರ ನಂದಗಾಂವ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಕ್ಷೇಮಲಿಂಗ ಬಿರಾದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲೇಖಕರ ಹೆಜ್ಜೆ ಗುರುತುಗಳು ಒಂದು ಅವಲೋಕನ ಎಂಬ ವಿಷಯದ ಕುರಿತು ಕಲಬುರಗಿಯ ಸರಕಾರಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಕಲ್ಯಾಣರಾವ ಪಾಟೀಲ ಅವರು ಮಾತನಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶರಣಬಸವಪ್ಪ ನದಿ ಸಿಣ್ಣೂರ ಮತ್ತು ತಂಡದವರಿಂದ ಗೀಗೀ ಪದದ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here