ಬಾಂದಾರ‌ ನಿರ್ಮಾಣ ಕಾಮಗಾರಿಕ್ಕೆಗೆ ಹೆಚ್ಚುವರಿಗೆ 24 ಕೋಟಿಗೆ ಸಿಎಂ ಆದೇಶ: ಪ್ರಿಯಾಂಕ್ ಖರ್ಗೆ

0
99

ಕಲಬುರಗಿ: ಸೇತುವೆ ಸಹಿತ ಬಾಂದಾರ‌ ನಿರ್ಮಾಣಕ್ಕೆ ರೂ 72 ಕೋಟಿಗೆ ಹೆಚ್ಚುವರಿಯಾಗಿ ರೂ 24 ಕೋಟಿ ಅನುದಾನ ಒದಗಿಸಲು ಆರ್ಥಿಕ ಇಲಾಖೆಗೆ‌ ಸಿಎಂ ಆದೇಶ ನೀಡಿದ್ದಾರೆಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಘೋಳನೂರು ಹಾಗೂ ಇಟಗಾ ಗ್ರಾಮಗಳ ನಡುವಿನ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಬಾಂದಾರ‌ ನಿರ್ಮಾಣ ಕಾಮಗಾರಿಯ ರೂ. 72 ಕೋಟಿಯ ಅಂದಾಜಿಗೆ ರೂ 24 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಿ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಸಹಮತಿ ನೀಡುವಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಆದೇಶಿಸಿರುವುದಾಗಿ ಖರ್ಗೆ ಅವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here