ಸಾಲಭಾದೆಗೆ ಯುವ ರೈತ ಆತ್ಮಹತ್ಯೆ

0
145

ಮಳವಳ್ಳಿ: ಸಾಲಭಾದೆ ತಾಳಲಾರದೆ ಯುವ ರೈತ ತೋಟಕ್ಕೆ ಸಿಂಪಡಿಸುವ ಔಷದಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಈರೇಗೌಡ ಪುತ್ರ ಕೆ. ರಾಜು(22) ಮೃತಪಟ್ಟ ಯುವರೈತ. ತಂದೆ ಹೆಸರಿನಲ್ಲಿದ್ದ 1 ಎಕರೆ ಜಮೀನಿನಲ್ಲಿ ಕೊಳವೆಬಾವಿ ಹಾಕಿದ್ದು ಅದು ಫೈಲೂರ್ ಯಾಗಿದ್ದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ
ಸ್ತ್ರೀಶಕ್ತಿ ಸ್ವಸಹಾಯ ಸಂಘ ಹಾಗೂ‌ಕೈ ಸಾಲ ಸೇರಿದಂತೆ 6 ಲಕ್ಷ. ರೂ ಸಾಲ ಮಾಡಿದ್ದ ಎನ್ನಲಾಗಿದೆ.

Contact Your\'s Advertisement; 9902492681

ಇಂದು ಬೆಳಿಗ್ಗೆ ಜಮೀನಿನ ಬಳಿ ಹೋಗುವುದಾಗಿ ಹೇಳಿ ಹೋದ ಇನ್ನೂ ಬರಲಿಲ್ಲ ಎಂದು ಜಮೀನಿನ ಬಳಿ ನೋಡಿದಾಗ ತೋಟಕ್ಕೆ ಸಿಂಪಡಿಸುವ ಔಷದಿ ಬಾಟಲ್ ಪಕ್ಕದಲ್ಲಿ ಬಿದ್ದಿದ್ದು, ಈತ ನರಳುತ್ತಿದ್ದನ್ನು ಕಂಡು ತಕ್ಷಣ ಮಳವಳ್ಳಿ ಸಾರ್ವಜನಿಕ ಆಸ್ವತ್ರೆ ಸೇರಿಸಲಾಗಿ ವೈದ್ಯರು ಮೃತಪಟ್ಟಿರುವ ತಿಳಿಸಿದರು ಎನ್ನಲಾಗಿದೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here