ಕಲಬುರಗಿ: ನಮ್ಮ ನಾಡಿನ 73ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ಕಲಬುರಗಿಯ ವಿವಿಧೋದ್ದೇಶ ಸೇವಾ ಸಂಘದ ಕನಮಸ್ ಪಾಟೀಲ್, ವಿವಿಧೋದ್ದೇಶ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಕೋವಿಡ್-19 ಜಾಗೃತಿ ಮತ್ತು ನಿಯಂತ್ರಣ ಕ್ರಮಗಳ ಕುರಿತು ಕಾರ್ಯಕ್ರಮವನ್ನು ಓಂ ನಗರ ಗೇಟ್ನಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಮಿಕರು ಮತ್ತು ಸಾರ್ವಜನಿಕರು ಮಾಸ್ಕ್ ಧರಿಸುವುದು, ಆರು ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮುಂತಾದ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ಕಾನಮಸ್ ಪಾಟೀಲ್ ವಿವಿಧೋದ್ದೇಶ ಸೇವಾ ಸಂಘದ ಅಧ್ಯಕ್ಷ ಶ್ರೀ.ಮಲ್ಲಿಕಾರ್ಜುನ ಪಾಟೀಲ್ ಬೆಳ್ಕೋಟ ಮನವಿ ಮಾಡಿದರು. ಹೀಗೆ ಮಾಡುವುದರಿಂದ ನಾವು ಕೋವಿಡ್ ಪೆಂಡಾಮಿಕ್ ಅನ್ನು ಕನಿಷ್ಠ ಮಟ್ಟಕ್ಕೆ ನಿಯಂತ್ರಿಸಬಹುದು ಎಂದು ಅವರು ಹೇಳಿದರು. ಸುಮಾರು 200 ಮಾಸ್ಕ್ಗಳನ್ನು ಬಡವರಿಗೆ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಬಸವರಾಜ ಬಿರಾದಾರ್, ಕಾರ್ಯದರ್ಶಿ ಶಾಂತವೀರಪ್ಪ ಪಾಟೀಲ್, ಸದಸ್ಯರಾದ ಬಸವರಾಜ ಗಂಜಿ, ಅಶೋಕಕುಮಾರ ಪಾಟೀಲ್, ಸಂತೋಷ ಶೆಟಗಾರ ಭಾಗವಹಿಸಿದ್ದರು.