ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ವೃತ್ತಿಯಿಂದ ವಜಾಗೊಳಿಸಿ: ಬಿಲ್ಕರ್

0
14

ಕಲಬುರಗಿ: ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿದ ನ್ಯಾಯಾಧೀಶರ ವಿರುದ್ಧ ದೂರು ಹಾಗೂ ಅವರನ್ನು ಹುದ್ದೆಯಿಂದ ವಜಾಗೋಳಿಸಬೇಕೆಂದು ಅಂಬೇಡ್ಕರ್ ಸೇನೆ ಜಿಲ್ಲಾ ಸಮೀತಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ ಗಣರಾಜ್ಯೋತ್ಸವ ದಿನದಂದು ಡಾ || ಬಿ.ಆರ್.ಅಂಬೇಡ್ಕರ್ ಅವರ ಪೋಟೊ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡರ ಇವರ ವೃತ್ತಿಗೌರವಕ್ಕೆ ಅವಮಾನ ಮಾಡಿದಲ್ಲದೆ ಸಂವಿಧಾನಕ್ಕೆ ಮತ್ತು ಭಾರತರತ್ನ ಮಹಾನಾಯಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ.

Contact Your\'s Advertisement; 9902492681

ಇವರು ನ್ಯಾಯಾಧೀಶ ಸ್ನಾನಕ್ಕೆ ಅರ್ಹತೆಯುಳ್ಳವರಲ್ಲ, ಇದು ರಾಯಚೂರು ಜಡ್ಜ್‌ರ ದೇಶದ್ರೋಹ ಕೃತ್ಯ ಈ ಕೂಡಲೇ ರಾಷ್ಟ್ರದ್ರೋಹ ಪ್ರಕರಣವನ್ನು ದಾಖಲಿಸಬೇಕು, ತಾವುಗಳು ಮಾನ್ಯ ಉಚ್ಛನ್ಯಾಯಾಲಯ ಮುಖ್ಯನ್ಯಾಯಾದೀಶರಿಗೆ ಸೂಚನೆಕೊಟ್ಟು ಮಲ್ಲಿಕಾರ್ಜುನಗೌಡ, ಜಿಲ್ಲಾ ನ್ಯಾಯಾದೀಶ ಸ್ಥಾನದಿಂದ ವಜಾಗೋಳಿಸಬೇಕು ಹಾಗೂ ಇವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ವೃತ್ತಿಯಿಂದ ವಜಾಗೊಳಿಸಬೇಕೆಂದು ಅಂಬೇಡ್ಕರ ಸೇನೆಯ ಜಿಲ್ಲಾಧ್ಯಕ್ಷ ಬಸವರಾಜ ಎಸ್.ಬಿಲ್ಕರ್ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಜುನಾಥ, ಗುರು, ಶ್ರೀಮತ ಕಿಲ್ಲೆದಾರ, ನಾಗೇಶ ನಡಗೇರಿ, ಕುಮಾರ ಕಾಂಬಳೆ, ಶ್ರವಣಕುಮಾರ ಗೂಡುರ, ಬಸವರಾಜ ಕಟ್ಟಿಮನಿ, ಸಿದ್ದರಾಮ ಕಂಡೆಕರ್, ಸಾಗರ ಜನ್ನ, ಅನೀಲ ದೊಡ್ಡಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here