ಕಲಬುರಗಿ: ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ನ್ಯಾಮೂ. ಮಲ್ಲಿಕಾರ್ಜುನ ಗೌಡರ ಅವರಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿತ್ರಪಟಕ್ಕೆ ಅವಮಾನವಾಗಿದೆ ಖಂಡನೀಯ ಎಂದು ಸಿಪಿಐ (ಎಂ) ಹೇಳಿದೆ.
ಇಂದು ಈ ಕುರಿತು ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು ಅಗತ್ಯ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೆ. ನೀಲಾ, ಎಂಬಿ ಸಜ್ಜನ, ಅಲ್ತಾಫ್ ಇನಾಂದಾರ, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ, ಭೀಮಶೆಟ್ಟಿ ಯಂಪಳ್ಳಿ, ಪ್ರಭು ಖಾನಾಪುರೆ, ಸಹಾನಾಜ ಅಖ್ತರ್ ಇದ್ದರು.