ಸುರಪುರ:ತಹಸೀಲ್ ಕಚೇರಿಯಲ್ಲಿ ಜನಸ್ಪಂದನ ಸಭೆ 31ಕ್ಕೆ

0
21

ಸುರಪುರ: ಶಾಸಕರ ಮೌಖಿಕ ನಿರ್ದೇಶನದ ಮೇರೆಗೆ ನಗರದ ತಹಸೀಲ್ ಕಚೇರಿ ಸಭಾಂಗಣದಲ್ಲಿ ಜನಸ್ಪಂದನ ಸಭೆಯನ್ನು ಇದೇ ೩೧ನೇ ತಾರೀಖು ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ತಹಸೀಲ್ದಾರರು ಈ ಹಿಂದೆ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯನ್ನು ಶಾಸಕರಿಗೆ ಕೋವಿಡ್ ಸೊಂಕು ದೃಢಪಟ್ಟಿದ್ದರಿಂದ ಸಭೆ ಮುಂದೂಡಲಾಗಿತ್ತು.ಅದರಂತೆ ಈಗ ಶಾಸಕರ ನಿರ್ದೇಶನದಂತೆ ೩೧ನೇ ತಾರೀಖು ಮದ್ಹ್ಯಾನ ೧ ಗಂಟೆಗೆ ಜನಸ್ಪಂದನ ಸಭೆ ನಡೆಯಲಿದೆ.ಆದ್ದರಿಂದ ತಾಲೂಕಿನ ಜನರು ಅಂದು ಸಭೆಗೆ ಆಗಮಿಸಿ ತಮ್ಮ ಕುಂದು ಕೊರತೆಗಳನ್ನು ಶಾಸಕರಿಗೆ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here