ರಾಜ್ಯ ಸರಕಾರದ ಆದೇಶಕ್ಕೆ ತಳವಾರ ಸಮುದಾಯ ಹರ್ಷ

0
116

ಕಲಬುರಗಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೊಟ್ಟಮಾತಿನಂತೆ ಇಂದು ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ನೀಡುವಂತೆ ಆದೇಶ ಮಾಡಿದ್ದಾರೆ. ಸರಕಾರಕ್ಕೆ ತಳವಾರ್ ಸಮಾಜದ ಮುಖಂಡರಾದ ಡಾ. ಸರ್ದಾರ ರಾಯಪ್ಪ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪೂರಕವಾಗಿ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಎಂಎಲ್ಸಿಗಳಾದ ಎನ್ ರವಿಕುಮಾರ ಅವರು ಸಹಕಾರದಿಂದ ಇಂದು ನಮಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಸಿಕ್ಕಿದೆ.

Contact Your\'s Advertisement; 9902492681

ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದಾಗಿ ನಮಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ಸಿಗುವಲ್ಲಿ ಅನ್ಯಾಯವಾದಾಗ, ಕೇಂದ್ರ ಸರ್ಕಾರ ಆದೇಶದಂತೆ ತಳವಾರರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಮೂರು ತಿಂಗಳುಗಳ ಧರಣಿ ಸತ್ಯಾಗ್ರಹ ಮಾಡಿದ್ದೆವು ಅದರ ಪ್ರತಿಫಲದಿಂದ ಇಂದು ನಮಗೆ ಜಯ ಸಿಕ್ಕಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೊತ್ಲಪ್ಪಮುತ್ತೆ, ರಾಜೇಂದ್ರ ರಾಜವಾಳ, ಶಿವಪ್ಪ ಗಾಣೂರ, ಮಹಾರಾಯ ಅಗಸಿ, ಬೆಳ್ಯಪ್ಪ ಖಣದಾಳ, ರವಿ ಗೊಳಾ ಶಾಬಾದ್, ಬಾಬು ಗೌಡ ಮಾಲಿ ಪಾಟೀಲ್ ಸೇರಿದಂತೆ ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here