ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಭಾರತ ಮುಕ್ತಿ ಮೋರ್ಚಾ ರಾಷ್ಟ್ರಪತಿಗೆ ಮನವಿ

0
4

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದಲ್ಲಿಂದು ಭಾರತ ಮುಕ್ತಿ ಮೋರ್ಚಾ ಸಂಘಟನೆಯ ಕಾರ್ಯಕರ್ತರು ಬಾಬಾ ಸಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನಿಸಿದ ನ್ಯಾಯಮೂರ್ತಿ ವಿರುದ್ಧ ಪ್ರತಿಭಟನೆ ಆಕ್ರೋಶ ವ್ಯಕ್ತಪಡಿಸಿದರು.

ಗಣರಾಜ್ಯೋತ್ಸವದ ದಿನದಂದು ರಾಯಚೂರು ಜಿಲ್ಲೆಯ ಜಿಲ್ಲಾ ನ್ಯಾಯಧೀಶರಾದ ಮಲ್ಲಿಕಾರ್ಜುನ ಗೌಡರವರು ಡಾ.ಅಂಬೇಡ್ಕರವರ ಭಾವಚಿತ್ರ ತೆಗೆದರೆ ಮಾತ್ರ ನಾನು ದ್ವಜಾರೋಹಣ ಮಾಡುತ್ತೇನೆಂದು ಅವೀವೇಕಿತನವನ್ನು ಹೊರಹಾಕಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರವರ ಭಾವಚಿತ್ರವನ್ನು ತೆಗೆಸಿ ದ್ವಜಾರೋಹಣ ಮಾಡಿದ ಸಂವಿಧಾನ ವಿರೋಧಿ.ರಾಷ್ಠ್ರ ವಿರೋಧಿ, ಜನ ವಿರೋಧಿ.ನ್ಯಾಯಧೀಶ ಮಲ್ಲಿಕಾರ್ಜುನ ಗೌಡರವರಿಗೆ ನೌಕರಿಯಿಂದ ವಜಾ ಮಾಡಿ ಅವರ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಬೇಕು ಅಲ್ಲದೆ ದೇಶದ್ರೋಹದಡಿ ಪ್ರಕರಣ ದಾಖಲಿಸುವಂತೆ ಪ್ರತಿಭಟನಾಕಾರರು ರಾಷ್ಟ್ರಪತಿಗಳಿಗೆ ಮನವಿಸಲ್ಲಿಸಿ ಆಗ್ರಹಿಸಿದರು.

Contact Your\'s Advertisement; 9902492681

ಈ ವೇಳೆಯಲ್ಲಿ ಮೋರ್ಚಾ ಅಧ್ಯಕ್ಷ ಮೋಹನ ಐನಾಪೂರ, ಚಂದ್ರಕಾಂತ್ ಮುತ್ತಂಗಿ, ಮಾರುತಿ ಗಂಜಗಿರಿ, ಶಿವಾನಂದ ಮಾಲಿಪಾಟೀಲ್, ಗೋಪಾಲ್ ಗಾರಂಪಳ್ಳಿ, ಮೌನೇಶ್ ಗಾರಂಪಳ್ಳಿ, ವಿಶ್ವನಾಥ್ ಐನಾಪೂರ, ಶಾಂತಬಾಯಿ ಉಪಸ್ಥಿತರಿದ್ದರು/

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here