ಮಹಿಳೆಯರು-ಮಕ್ಕಳಿಗೆ ತೊಂದರೆಯಾದರೆ ಅಭಿವೃದ್ಧಿ ಮೇಲೆ ಪರಿಣಾಮ: ಜಿ.ಪಂ. ಸಿಇಓ ಡಾ.ದಿಲೀಷ್ ಶಶಿ

0
15

ಕಲಬುರಗಿ: ಮಹಿಳೆಯರಿಗೆ ಹಾಗೂ ಮಕ್ಕಳಿಗೆ ತೊಂದರೆಯಾದರೆ ಅದು ಒಂದು ದೇಶ ಅಥವಾ ರಾಜ್ಯದ ಅಭಿವೃದ್ಧಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಕಲಬುರಗಿ ಡಾ. ದಿಲೀಷ್ ಶಶಿ ಅವರು ಹೇಳಿದರು.

ಬುಧವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆಯ ಕುರಿತು ತಯಾರಿಸಿರುವ ಕ್ರಮಬದ್ಧ ಕಾರ್ಯ ವಿಧಾನ ಮಾರ್ಗಸೂಚಿಗಳ ಬಗೆಗಿನ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತಾನಾಡಿದರು.

Contact Your\'s Advertisement; 9902492681

ಅನೈತಿಕ ಸಾಗಾಣಿಕೆ ಒಂದು ಸಂಘಟಿತ ಅಪರಾಧ. ಇದಕ್ಕೆ ಎಲ್ಲಾ ಇಲಾಖೆಯವರಿಗೆ ಉನ್ನತ ಮಟ್ಟದ ತರಬೇತಿ ನೀಡಬೇಕು. ಎಲ್ಲಾ ಸರಕಾರಿ ಕಚೇರಿಯವರು ಸಂಘಟಿತರಾಗಿ ಕಾಂii ಮಾಡಿದಾಗ ಮಾತ್ರ ಜಿಲ್ಲೆಯಲ್ಲಿ ಈ ಸಮಸ್ಯೆಗೆ ಶೇ ೫೦-೬೦% ರಷ್ಟು ಬದಲಾವಣೆ ತರಬಹುದು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುಶಾಂತ್ ಎಮ್ ಚೌಗಲೆ ಅವರು ಅಧ್ಯಕ್ಷತೆ ವಹಿಸಿ ಮಾತಾನಾಡಿ, ಮೊದಲೆಲ್ಲ ಕೇವಲ ಭಿಕ್ಷಾಟನೆಗೆ ಸೀಮಿತವಾಗಿದ್ದ ಮಾನವ ಕಳ್ಳಸಾಗಾಣಿಕೆ ಇಂದು ಮಾನವನ ಅಂಗಾಗಗಳಾದ ಕಿಡ್ನಿ, ಕಣ್ಣು, ಹೃದಯದಂತ ಭಾಗಗಳ ಮಾರಾಟ ಮಾಡಲಿಕ್ಕೆ ಮಾನವ ಸಾಗಾಣಿಕೆ ನಡೆದಿದೆ. ಇದೆಲ್ಲ ಗಮನಿಸಿದರೆ ಇದೊಂದು ಬಹುದೊಡ್ಡ ಸಂಘಟಿತ ಕೃತ್ಯವಾಗಿದೆ. ಹೀಗಾಗಿ ಅದನ್ನು ತಡೆಯಲು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಜಮೀನ್ದಾರರ ಮನೆಯಲ್ಲಿ ಚಾಕಾರಿ/ಜೀತ ಮಾಡುತ್ತಿದ್ದು ಸಹ ಒಂದು ರೀತಿಯ ಮಾನವ ಕಳ್ಳ ಸಾಗಾಣಿಕೆಯಾಗಿತ್ತು ಎಂದು ಅವರು ತಿಳಿಸಿದರು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಾನವನ ಕಳ್ಳ ಸಾಗಾಣಿಕೆ ದೇಶಕಷ್ಟೆ ಅಲ್ಲದೇ. ಇಡೀ ವಿಶ್ವಕ್ಕೆ ಬಹುದೊಡ್ಡ ಪಿಡುಗಾಗಿದೆ. ಆದುದರಿಂದ ಕಾನೂನಿನ ಅಡಿಯಲ್ಲಿ ಈ ಪಿಡುಗಿನ ವಿರುದ್ಧ ಹೋರಾಡಲು ಅನೇಕ ಕಾಯ್ದೆಗಳು ಇವೆ. ಅದರ ಭಾಗವಾಗಿಯೇ ಎ.ಎಚ್.ಟಿ ( ಆಂಟಿ ಹ್ಯೂಮನ್ ಟ್ರ್ರಾಫಿಕ್ಕಿಂಗ್) ಎಲ್ಲೆಲ್ಲಿ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತದೆಯೋ ಅಲ್ಲಲ್ಲಿ ಕಾರ್ಯಚರಣೆ ಮಾಡುತ್ತದೆ. ಇದರೊಂದಿಗೆ ನಾವೆಲ್ಲರೂ ಒಂದಾಗಿ ಜನರನ್ನು ಜಾಗೃತಗೊಳಿಸುವ ಪಣ ತೊಡಬೇಕು ಎಂದರು.

ನಗರ ಉಪ-ಪೋಲೀಸ್ ಆಯುಕ್ತ ಶ್ರೀನಿವಾಸ ಅಡೂರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇದು ತುಂಬಾ ಗಂಭೀರ ವಿಷಯ. ಇದು ಬಹಳ ವರ್ಷಗಳಿಂದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ನಡೆಯುತ್ತಾ ಇದೆ. ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಾಗಾರ ತುಂಬಾ ಅವಶ್ಯಕ. ಎಲ್ಲಾ ಇಲಾಖೆಗಳ ಸಹಾಕಾರದಿಂದ ಈ ಸಮಸ್ಯೆ ನಿಲ್ಲಿಸಬಹುದು ಎಂದರು.

ಈ ಸಂದರ್ಭದಲ್ಲಿ ಸಹಾಯಕ ಪೋಲೀಸ್ ಆಯುಕ್ತರಾದ ದೀಪನ್ ಎಮ್.ಎನ್, ಮಾನವನ ಕಳ್ಳ ಸಾಗಣಿಕೆ ರಾಜ್ಯ ಉನ್ನತಾಧಿಕಾರಿ ಸಮಿತಿ ಸದಸ್ಯರಾದ ಪ್ರತೀಮಾ. ಲೀಗಲ್ ಕಂ. ಪ್ರೊಬೇಶನರ್ ಅಧಿಕಾರಿ ಭರತೇಶ ಶೀಲವಂತರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಬಸಪ್ಪಾ ಬೆಳಗುಂಪಿ ಮುಂತಾದವರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನಕುಮಾರ ಯು. ಅವರು ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here