ಸಂಗೀತಕ್ಕೆ ಮನಸ್ಸನ್ನು ಪ್ರಫುಲ್ಲಗೊಳಿಸುವ ಶಕ್ತಿ ಇದೆ-ಗೋವಿಯಸ್

0
53

ಶಹಬಾದ :ಸಂಗೀತಕ್ಕೆ ಮನಸ್ಸನ್ನು ಪ್ರಫುಲ್ಲಗೊಳಿಸುವ ಶಕ್ತಿ ಇದೆ. ಮನವನ್ನು ಅರಳಿಸಿ ಹೃದಯವನ್ನು ಉದ್ದೀಪಿಸಿ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದರೊಂದಿಗೆ ಬದುಕುವ ರೀತಿ-ನೀತಿಗಳನ್ನು ಕಲಿಸುತ್ತದೆ ಎಂದು ಸೆಂಟ್ ಥಾಮಸ್ ಚರ್ಚ್‌ನ ಫಾದರ್ ಸ್ಟೇನಿ ಗೋವಿಯಸ್ ಅಭಿಪ್ರಾಯ ಪಟ್ಟರು.

ಅವರು ಜಿ.ಬಿ.ಸಂಗೀತಾ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಘಟಕ/ಸಾಮನ್ಯ ಯೋಜನೆಯಡಿ ನಗರದ ಸೆಂಟ್ ಥಾಮಸ್ ಶಾಲೆಯಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಸಂಗೀತಕ್ಕೆ ತನ್ನದೆ ಆದ ಇತಿಹಾಸ, ಪರಂಪರೆ ಇದೆ. ಧಾರ್ಮಿಕ ಹಿನ್ನೆಲೆ ಹೊಂದಿರುವ ಇದು ಸಾಹಿತ್ಯ, ಗಾನ, ನೃತ್ಯ ಈ ಮೂರು ಪ್ರಕಾರಗಳನ್ನು ಮೇಳೈಸಿಕೊಂಡು ಮನಸಿಗೆ ಮುದ ನೀಡುತ್ತದೆ. ಸಂಗೀತ ಹಾಗೂ ಗಾಯನವನ್ನು ಆಧುನಿಕತೆಗೆ ಮುಖಾಮುಖಿಯಾಗಿಸಿಕೊಂಡು ಅಸ್ಮಿತೆಯನ್ನು ಹಾಗೆ ಉಳಿಸಿಕೊಳ್ಳಬೇಕಿದೆ.

ಸಂಗೀತ, ಜ್ಞಾಪನ ಶಕ್ತಿಯನ್ನು ಹೆಚ್ಚಿಸುವ ಮೂಲಕ ಶಾಂತಿ-ಸಮಾಧಾನ ನೀಡುತ್ತದೆ. ಜಗತ್ತಿನ ಜೀವ-ಜಂತುಗಳು ಸಹ ನಾದಕ್ಕೆ ತಲೆದೂಗುತ್ತವೆ. ಇತ್ತೀಚಿಗೆ ಸಂಗೀತ ತೋಟಗಳನ್ನು ನಿರ್ಮಾಣ ಮಾಡುವುದರೊಂದಿಗೆ ಗಿಡ-ಮರಗಳು ಸಹ ಸಂಗೀತಕ್ಕೆ ಮಾರು ಹೋಗಿವೆ ಎಂದು ಸಂಶೋಧನೆ ಮಾಡಲಾಗಿದೆ.

ಅಧ್ಯಕ್ಷತೆ ವಸಹಿ ಮಾತನಾಡಿ ಹಿರಿಯ ಕಲಾವಿದ ಜಿ.ಎಸ್.ನನ್ನಾವರೆ ಮಾತನಾಡಿ, ಗಾಯನ ಕ್ಷೇತ್ರದಲ್ಲಿ ಹಲವಾರು ಪ್ರತಿಭೆಗಳು ತಮ್ಮ ಹಾಡುಗಳನ್ನು ಹಾಡುವ ಮುಖೇನ ಲೋಕ ಪ್ರಸಿದ್ದಿಯಾಗಿದ್ದಾರೆ. ಈ ದಿಸೆಯಲ್ಲಿ ಸಂಗೀತ ಜಾಗೃತಿ ಮೂಡಿಸುವುದರೊಂದಿಗೆ ಮುಂದಿನ ಜನಾಂಗಕ್ಕೆ ಅದನ್ನು ಹಸ್ತಾಂತರಿಸುವ ಕಾರ್ಯ ಜರುಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ನಗರಸಭೆಯ ಸದಸ್ಯೆ ಸಾಬೇರಾ ಬೇಗಂ, ಇಂಗಳಗಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ, ಜಿ.ಬಿ. ಸಂಗೀತಾ ಕಲಾ ಸಂಸ್ಥೆಯ ಕಾರ್ಯದರ್ಶಿ ಶಾಂತಪ್ಪ ಹಡಪದ ವೇದಿಕೆಯ ಮೇಲಿದ್ದರು.

ಶಾಸ್ತ್ರೀಯ ಸಂಗೀತವನ್ನು ಕಲಾವಿದ ಮೌನೇಶ್ವರರಾವ ಸೂನಾರ್, ವಚನ ಗಾಯನವನ್ನು ಕಲಾವಿದೆ ಸುಲಲಿತಾ ಕೊಳ್ಳಿ, ದಾಸವಾಣಿಯನ್ನು ಸೇಡಂನ ಕಲಾವಿದೆ ವಿಜಯಲಕ್ಷ್ಮಿ ಕಟ್ಟಿಮನಿ ನಡೆಸಿಕೊಟ್ಟರು. ತಬಲಾ ಕಲಾವಿದರಾದ ನಾಗಭೂಷಣ ಸ್ಥಾವರಮಠ, ಲೋಕೇಶ ಪತ್ತಾರ, ಪೂಜಾ ಮೋನಯ್ಯಾ ಹಾರ್ಮೋನಿಯಂ ಸಾಥ್ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here