ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ

0
10

ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮತ್ತು ಸಂವಿಧಾನಿಕ ಹುದ್ದೆಗೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಹಾಗೂ ಕಲಬುರಗಿ ಜಿಲ್ಲಾಡಳಿತದಿಂದ ಕೂಡ ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೋಳಬೇಕೆಂದು ನವ ಕಲ್ಯಾಣ ಕರ್ನಾಟಕ ಜನಪರ ಸಂಘದ ಅಧ್ಯಕ್ಷ ರಾಕೇಶ (ಸಿದ್ದು ಬಾಬಾ) ಅವರು ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದಾರೆ.

ಜನೇವರಿ ೨೬ ರಂದು ರಾಯಚೂರು ಜಿಲ್ಲಾ ಕೋರ್ಟ್ ಆವರಣದಲ್ಲಿ ನಡೆದ ಸಂವಿಧಾನ ದಿನಾಚರಣೆ| ಗಣರಾಜ್ಯೋತ್ಸವದ ದಿನದಂದು ರಾಯಚೂರಿನ ಮಲ್ಲಿಕಾರ್ಜುನ ಗೌಡ ಎನ್ನುವ ಪ್ರಧಾನ ಜಿಲ್ಲಾ ನ್ಯಾಯಾಧೀಶ ನನ್ನ ಅಪ್ಪಣೆ ಇಲ್ಲದೇ ಅಂಬೇಡ್ಕರ್ ರವರ ಭಾವಚಿತ್ರವನ್ನು ಇಡಲಾಗಿದೆ.

Contact Your\'s Advertisement; 9902492681

ಅವರ ಭಾವಚಿತ್ರವನ್ನು ತೆಗೆದರೆ ಮಾತ್ರ ನಾನು ಧ್ವಜಾರೋಹಣ ಮಾಡುತ್ತೇನೆ ಇಲ್ಲವಾದರೆ ಬರುವುದಿಲ್ಲವೆಂದು ಹೇಳಿ, ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ತಮ್ಮ ಪ್ರಭಾವ ಬಳಿಸಿ ಕಾರ್ಯಕ್ರಮದ ಮುಖ್ಯಸ್ಥಳದಿಂದ ತೆಗೆಸಿರುತ್ತಾರೆ. ಭಾರತದ ಪ್ರಜಾಪ್ರಭುತ್ವದ ಬಹುಮುಖ್ಯ ಅಂಗ ನ್ಯಾಯಾಂಗ ಅಂತಹ ಶ್ರೇಷ್ಠ ನ್ಯಾಯಾಂಗದ ಮುಖ್ಯ ಜಿಲ್ಲಾ ನ್ಯಾಯಾಧೀಶರಾಗಿ ಭಾರತ ಸಂವಿಧಾನದ ಅನುಚ್ಛೇದ ೨೩೩ ರ ಅಡಿಯಲ್ಲಿ ಜಿಲ್ಲಾ ನ್ಯಾಯಾಧೀಶರ ನೇಮಕಾತಿಯ ಪ್ರಕ್ರಿಯೆಯಿಂದ ಆಯ್ಕೆಯಾದ ಮಲ್ಲಿಕಾರ್ಜುನ ಗೌಡರವರ ಈ ನಡೆ ನಾಗರೀಕ ಸಮಾಜಕ್ಕೆ ತೀವ್ರ ಆತಂಕ ಮತ್ತು ನೋವು ತಂದೊಡ್ಡಿದೆ.

ಸಂವಿಧಾನದ ಬಗ್ಗೆ ಸಂವಿಧಾನ ನಿರ್ಮಾತೃಗಳ ಬಗ್ಗೆ ಇಷ್ಟು ಪೂ ಪೀಡಿತ ಮನಸ್ಥಿತಿ ಇರುವ ನ್ಯಾಯಾಧೀಶರಿಂದ ನಿಷ್ಪಕ್ಷಪಾತ ನ್ಯಾಯಾದಾನವನ್ನು ನೀರಿಕ್ಷಿಸಲು ಹೇಗೆ ಸಾಧ್ಯ? ನ್ಯಾಯಾಲಯದ ಮೇಲೆ ನಾಗರೀಕ ಸಮಾಜ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂವಿಧಾನ ರಚನೆಗೆ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಘನತೆಯನ್ನು ಎತ್ತಿಹಿಡಿಯಲು.

ಈ ಪ್ರಕರಣವನ್ನು ಕರ್ನಾಟಕ ರಾಜ್ಯ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದು ಮಲ್ಲಿಕಾರ್ಜುನಗೌಡ ಎಂಬ ಜಿಲ್ಲಾ ನ್ಯಾಯಾಧೀಶರನ್ನು ನ್ಯಾಯಾಧೀಶರ ವಿಚಾರಣಾ ಕಾಯಿದೆ ೧೯೬೮ ” ಮತ್ತು  ನ್ಯಾಯಾಧೀಶರ ವಿಚಾರಣೆ ಅಧಿನಿಯಮ ೧೯೬೯ ” ರ ನಿಯಮಗಳ ಅನುಸಾರ ಅಸಮರ್ಥತೆ ಮತ್ತು ಅನುಚಿತ ಮತ್ತು ಆಧಾರದಲ್ಲಿ ಅವರನ್ನು ನ್ಯಾಯಾಧೀಶರ ಹುದ್ದೆಯಿಂದ ವಜಾ ಮಾಡಬೇಕು ಮತ್ತು ಇದರ ಜೊತೆಗೆ ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಡಾ.ಬಿ.ಆರ್. ಅಂಬೇಡ್ಕರ ಮತ್ತು ಮಹಾತ್ಮ ಗಾಂಧಿ ರವರ ಫೋಟೋವನ್ನು ಇಡಲಾರದೇ ಅವಮಾನ ದೂರು ದಾಖಲಿಸಿ ಸದರಿ ಅಧಿಕಾರಿಗಳನ್ನು ವಜಾಮಾಡಬೇಕೆಂದು. ಎಂದು ಪ್ರಕಟಣೆಯಲ್ಲಿ ತಿಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here