9 ರಂದು “ರಕ್ಷಕ” ಕಥಾ ಸಂಕಲನ ಅವಲೋಕನ ಕಾರ್ಯಕ್ರಮ

0
30

ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ಹತ್ತಿರದ ಕಲಾಮಂಡಳದಲ್ಲಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಿರಿಯ ಸಾಹಿತಿ ಸುಬ್ರಾವ ಕುಲಕರ್ಣಿಯವರು ರಚಿಸಿದ 10ನೇ ಕಥಾ ಸಂಕಲನ “ರಕ್ಷಕ” ಅವಲೋಕನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದುಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಚ್.ನಿರಗುಡಿ ತಿಳಿಸಿದ್ದಾರೆ.

9 ರಂದು ಸಾಯಂಕಾಲ :5:30ಕ್ಕೆ ಕಾರ್ಯಕ್ರಮವನ್ನು ರಂಗಾಯಣದ ನಿರ್ದೇಶಕರಾದ ಶ್ರೀಪ್ರಭಾಕರ ಜೋಶಿಯವರು ಉದ್ಘಾಟಿಸಲಿದ್ದು, ಕಥಾ ಸಂಕಲವನ್ನು ಅವಲೋಕಿಸುವರು ಡಾ.ಶೈಲಜಾ ಎನ್.ಭಾಗೇವಾಡಿ,ಕನ್ನಡ ಉಪನ್ಯಾಸಕರು, ಹಾಗೂ ಮುಖ್ಯ ಅತಿಥಿಗಳಾಗಿ ಪ್ರೊ.ಕೆ.ಎಸ್.ನಾಯಕ, ಖ್ಯಾತ ಕಥೆಗಾರರು, ಇವರು ಭಾಗವಹಿಸಲಿದ್ದಾರೆ.

Contact Your\'s Advertisement; 9902492681

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಲಿಂಗೇಶ್ವರ ಬುಕ್ ಡಿಪೋದ ಮುಖ್ಯಸ್ಥರು ಮತ್ತು ಪ್ರಕಾಶಕರಾದ ಬಸವರಾಜ ಕೋನೆಕ್ ಅವರು ವಹಿಸಿಕೊಳ್ಳಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here