10 ವರೆಗೆ ಶ್ರೀರಾಮೋತ್ಸವ

0
15

ಕಲಬುರ್ಗಿ: ಇಲ್ಲಿನ ರಿಂಗ್ ರಸ್ತೆಯ ಶ್ರೀ ರಾಮ ಮಂದಿರದಲ್ಲಿ ಶ್ರೀ ಪಾದೂರು ರಾಮಕೃಷ್ಣ ತಂತ್ರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಮ ನವಮಿ ಪ್ರಯುಕ್ತ ” ಶ್ರೀರಾಮೋತ್ಸವ 10 ವರೆಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಪ್ರಯುಕ್ತ ರಾಮನವಮಿ ದಿನದವರೆಗೆ ಪಂ. ಶ್ರೀ ದ್ವೈಪಾಯನ ಆಚಾರ್ಯ ಬೆಂಗಳೂರು ಇವರಿಂದ ಸಾಯಂಕಾಲ 6.30 ಗಂಟೆಗೆ ‘ ಶ್ರೀಮದ್ ರಾಮಾಯಣ ‘ ವಿಷಯದ ಮೇಲೆ ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ.

ಹಾಗೆ ದಿನಾಂಕ 10-04-2022 ರಾಮನವಮಿಯ ಶುಭ ದಿನದಂದು ಬೆಳಗ್ಗೆ 6.00 ಗಂಟೆಗೆ ಪಂಚಾಮೃತ ಅಭಿಷೇಕ, 11.00 ಗಂಟೆಗೆ ಶ್ರೀ ರಾಮ ಅಷ್ಟೋತ್ತರ, 12.00 ಗಂಟೆಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ ಕಾರಣ ಕಲಬುರ್ಗಿ ನಗರದ ಭಗವದ್ಭಕ್ತರು ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ರಾಮದೇವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟಿನ ಅಧ್ಯಕ್ಷರಾದ ಶ್ರೀ ವಿದ್ಯಾಧರ ಭಟ್ಟ ಹಾಗೂ ಕಾರ್ಯದರ್ಶಿಗಳಾದ ಶ್ರೀ ಕಿಶೋರ ದೇಶಪಾಂಡೆ ಅವರು ವಿನಂತಿಸಿದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here