ಯುವಕನ ಸುಲಿಗೆ: ಐವರಲ್ಲಿ ಓರ್ವನ ಸೆರೆ, ಮೂರು ದ್ವಿಚಕ್ರವಾಹನಗಳ ಜಪ್ತಿ

0
87

ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನವನದಲ್ಲಿನ ಡೈನೋಸಾರ್ ಉದ್ಯಾನವನದಲ್ಲಿ ಯುವಕನೋರ್ವನಿಗೆ ಹೆದರಿಸಿ ಹಣ ಸುಲಿಗೆ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಲ್ಲಿ ಓರ್ವನಿಗೆ ಪೋಲಿಸರು ಬಂಧಿಸಿ, ಆತನಿಂದ ಸುಮಾರು ಒಂದು ಲಕ್ಷ ರೂ.ಗಳ ಮೌಲ್ಯದ ಮೂರು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ನಗರದ ನಯಾ ಬ್ಯಾಂಕ್ ಕಾಲೋನಿಯ ಮಿಜಗುರಿ ಬಡಾವಣೆಯ ಮಜಿದ್ ಹತ್ತಿರದ ನಿವಾಸಿ ಹಾಗೂ ಆಟೋ ಚಾಲಕ ನಿವಾಸಿ ಸೈಯದ್ ಶಹಾಬಾಜ್ ತಂದೆ ಸೈಯದ್ ಅಲ್ತಾಫ್ (೨೦) ಎಂದು ಗುರುತಿಸಲಾಗಿದೆ. ಸಾರ್ವಜನಿಕ ಉದ್ಯಾನವನದಲ್ಲಿ ಹಾಲಿ ವಸ್ತಿ ಪುಣೆಯ, ಮೂಲತಃ ಜಿಲ್ಲೆಯ ಆಳಂದ್ ತಾಲ್ಲೂಕಿನ ಧುತ್ತರಗಾಂವ್ ಗ್ರಾಮದ ಎಲೆಕ್ಟ್ರಿಷಿಯನ್ ಉದ್ಯೋಗಿ ರಾಘವೇಂದ್ರ ಮಲ್ಲಿಕಾರ್ಜುನ್ ಕುಂಬಾರ್ ಎಂಬ ಯುವಕನಿಗೆ ಹೆದರಿಸಿದ ಐವರು ಆತನಲ್ಲಿದ್ದ ಸುಮಾರು ೧೫೦೦ರೂ.ಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು.

Contact Your\'s Advertisement; 9902492681

ಈ ಕುರಿತು ಹಣ ಕಳೆದುಕೊಂಡ ವ್ಯಕ್ತಿ ಬ್ರಹ್ಮಪೂರ್ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪಿಐ ಶ್ರೀಮಂತ್ ಇಲ್ಲಾಳ್, ಎಎಸ್‌ಐ ಸಲಿಮೋದ್ದೀನ್, ಸಿಬ್ಬಂದಿಗಳಾದ ವೆಂಕಟೇಶ್, ಸುರೇಶ್ ಅವರು ಕಾರ್ಯಾಚರಣೆಯನ್ನು ಕೈಗೊಂಡು ಓರ್ವ ಆರೋಪಿಯನ್ನು ಬಂಧಿಸಿ, ಆತನಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರು ಆರೋಪಿಗಳ ಪತ್ತೆ ಕಾರ್ಯಾಚರಣೆಯನ್ನು ಪೋಲಿಸರು ಮುಂದುವರೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here