ಕಲಬುರಗಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಬಾಬುರಾವ, ರಾಜ್ಯ ಸಮಿತಿ ಸದಸ್ಯರಾಗಿ ಸತ್ಯಂಪೇಟೆ ಆಯ್ಕೆ

0
233

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಾಬುರಾವ ಯಡ್ರಾಮಿ, ಉಪಾಧ್ಯಕ್ಷರಾಗಿ ದೇವಿಂದ್ರಪ್ಪ ಅವಂಟಿ, ಸುರೇಶ ಬಡಿಗೇರ, ರಾಮಕೃಷ್ಣ ಬಡಶೇಷಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿ ಡೈಲಿ ನ್ಯೂಸ್ ಪತ್ರಿಕೆಯ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕ ಡಾ. ಶಿವರಂಜನ್ ಸತ್ಯಂಪೇಟೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ಅಧಿಕೃತವಾಗಿ ಘೋಷಿಸಿದರು.

ಫೆ.27ರಂದು ರಾಜ್ಯ ಮತ್ತು ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಿ, ಅದೇ ದಿನ ಮತ ಎಣಿಕೆ ಪೂರ್ಣಗೊಳಿಸಲಾಗಿತ್ತು. ಆದರೆ ಹೈ ಕೋರ್ಟ್ ನಿರ್ದೇಶನದಂತೆ ಫಲಿತಾಂಶವನ್ನು ಪ್ರಕಟಿಸಿರಲಿಲ್ಲ.  ಹೈಕೋರ್ಟ್‍ನಲ್ಲಿ ಸಲ್ಲಿಕೆಯಾಗಿದ್ದ ತಕರಾರು ಅರ್ಜಿ  ಸೋಮವಾರ ತಿರಸ್ಕøತಗೊಂಡಿದ್ದರಿಂದ ಫಲಿತಾಂಶವನ್ನು ಘೋಷಿಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಸಂಗಮನಾಥ ರೇವತಗಾಂವ (ಪ್ರಧಾನ ಕಾರ್ಯದರ್ಶಿ), ಅಶೋಕ ಕಪನೂರ (ಖಜಾಂಚಿ), ಮಲ್ಲಿಕಾರ್ಜುನ ಜೋಗ, ವೀರೇಂದ್ರ ಕೊಲ್ಲೂರ, ಅರುಣಕುಮಾರ ಅವಿರೋಧವಾಗಿ (ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.

ಜಯತೀರ್ಥ ಪಾಟೀಲ್, ಭೀಮಾಶಂಕರ ಫಿರೋಜಾಬಾದ್, ಚಂದ್ರಶೇಖರ ಕೌವಲಗಾ, ಅನೀಲ ಸ್ವಾಮಿ, ಬಿ.ವಿ.ಚಕ್ರವರ್ತಿ, ವಿಜೇಂದ್ರ ಕೋಡ್ಲಾ, ಶಿವಕುಮಾರ ನಿಡಗುಂದಾ, ಸಂತೋಷ ನಾಡಗಿರಿ, ಮೊಹ್ಮದ್ ಮುಕ್ತರೋದ್ದೀನ್, ರವೀಂದ್ರ ವಕೀಲ, ಅವಿನಾಶ ದೊಡ್ಮನಿ, ವಾಸುದೇವ ಚವ್ಹಾಣ್, ರಾಜು ಕೋಷ್ಟಿ, ವಿರುಪಾಕ್ಷಿ ಚಿನಗುಡಿ, ಬಾಬುರಾವ ಕೋಬಾಳ (ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ) ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಸಹಾಯಕ ಚುನಾವಣಾಧಿಕಾರಿ ಉಮಾಶಂಕರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here