ನಿಂಗಾಪುರ ಮಾವಿನಮಟ್ಟಿಗೆ ಬಸ್ ಓಡಿಸಿ: ರಾಜಾ ವೆಂಕಟಪ್ಪ ನಾಯಕ

0
19

ಸುರಪುರ: ನಿಂಗಾಪುರ ಮತ್ತು ಮಾವಿನಮಟ್ಟಿ ಗ್ರಾಮಗಳಿಗೆ ಬಸ್ ಓಡಿಸುವಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಇಲ್ಲಿಯ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಮಾಜಿ ಶಾಸಕರು,ಸುರಪುರ ವಿಧಾನಸಭಾ ಕ್ಷೇತ್ರದ ನಿಂಗಾಪುರ ಎಮ್.ಗ್ರಾಮಕ್ಕೆ ಕಕ್ಕೇರಾ ಮಾರ್ಗವಾಗಿ ಹುಣಸಗಿ ಬಸ್ ಆರಂಭಿಸಿ,ಇದರಿಂದ ನಿಂಗಾಪುರ ಎಮ್ ಗ್ರಾಮದ ಜನರಿಗೆ ಅನುಕೂಲವಾಗಲಿದೆ.ಅಲ್ಲದೆ ಈ ಹಿಂದೆ ಕಳೆದ ೨೦ ವರ್ಷಗಳಿಂದ ಪೇಠ ಅಮ್ಮಾಪುರ,ಜಾಲಿಬೆಂಚಿ,ಮಂಗಳೂರು ಮಾರ್ಗವಾಗಿ ಮಾವಿನಮಟ್ಟಿಗೆ ರಾತ್ರಿ ವಸತಿ ಬಸ್ ಓಡಿಸಲಾಗುತ್ತಿತ್ತು.

Contact Your\'s Advertisement; 9902492681

ಆದರೆ ಈ ಬಸ್ ಈಗ ಕಳೆದ ಅನೇಕ ತಿಂಗಳುಗಳಿಂದ ನಿಲ್ಲಿಸಲಾಗಿದೆ.ಇದರಿಂದ ಮಾವಿನಮಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿರುವುದಾಗಿ ಜನರು ಹೇಳುತ್ತಿದ್ದಾರೆ.ಆದ್ದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕೂಡಲೇ ಈ ಎರಡು ಬಸ್‌ಗಳನ್ನು ಆರಂಭಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here