ಅಂಬೇಡ್ಕರ್ ಜಯಂತೋತ್ಸವ ನಿಮಿತ್ತ ರೋಗಿಗಳಿಗೆ ಕರವೇ ಹಣ್ಣು ಹಂಪಲು ವಿತರಣೆ

0
8

ಕಲಬುರಗಿ: ಡಾ.ಬಿ.ಆರ್ ಅಂಬೇಡ್ಕರ್ ರವರ ೧೩೧ ನೇ ಜಯಂತೋತ್ಸವ ಅಂಗವಾಗಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಕರವೇ (ಕನ್ನಡಿಗರ ಬಣ) ದ ವಿಭಾಗೀಯ ಅಧ್ಯಕ್ಷ ಶರಣು ಹೊಸಮನಿ ನೇತೃತ್ವದಲ್ಲಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಪತ್ರಕರ್ತ ಸುರೇಶ ಬಡಿಗೇರ, ಕಾಶಿನಾಥ ಮಾಳಗೆ, ಆನಂದ ತೆಗನೂರ, ಅನೀಲ ಹೊಸಮನಿ, ಮಹೇಶ ಹೊಸಮನಿ, ಪ್ರವೀಣ ಹೊಸಮನಿ, ಜೈರಾಜ ಕಿಣಗಿಕರ್ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here