ವಚನ ಜಾತ್ರೆ-೨೦೨೨ ರಲ್ಲಿ ವಿವಿಧ ಸಾಧಕರಿಗೆ ಗೌರವ ಸನ್ಮಾನ

0
32

ಭಾಲ್ಕಿ: ನಾಡಿನ ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಯುವ ಸಂಘಟನೆ ಮುಂತಾದ ಕ್ಷೇತ್ರಗಳಲ್ಲಿ ಗಣನಿಯ ಸೇವೆ ಮಾಡುತ್ತಿರುವ ಅನೇಕ ಮಹನೀಯರನ್ನು ಗುರುತಿಸಿ ಗೌರವಿಸಬೇಕಾಗಿರುವುದು ನಾಗರಿಕ ಸಮಾಜದ ಕರ್ತವ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಹಿರೇಮಠ ಸಂಸ್ಥಾನ ಭಾಲ್ಕಿ ವತಿಯಿಂದ ಪ್ರತಿವರ್ಷ ಇಂತಹ ಮಹನೀಯರಿಗೆ ಗೌರವಿಸಿ ಪ್ರೋತ್ಸಾಹಿಸಲಾಗುತ್ತಿದೆ. ಪ್ರಸಕ್ತ ಸಾಲಿನ ವಚನ ಜಾತ್ರೆ ಹಾಗೂ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ೨೩ನೇ ಸ್ಮರಣೋತ್ಸವ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಯಶಸ್ವಿ ಸಾಧಿಸಿದ ಈ ಕೆಳಕಂಡ ಸಾಧಕರಿಗೆ ಪ್ರೋತ್ಸಾಹಿಸಲಾಗುತ್ತಿದೆ.

ಇದನ್ನೂ ಓದಿ: ವೀರ ವೀರಾಗಿಣಿ ಅಕ್ಕಮಹಾದೇವಿ ಜಯಂತಿ ಆಚರಣೆ

Contact Your\'s Advertisement; 9902492681

ನಾಡೋಜ ಗೊ.ರು.ಚನ್ನಬಸಪ್ಪ, ಶರಣೆ ಮಾತಾ ಮಂಜಪ್ಪ ಜೋಗತಿ, ಶರಣ ಬಿ.ಎಸ್.ಪರಮಶಿವಯ್ಯ, ಶರಣ ಸತೀಶಕುಮಾರ ಹೊಸಮನಿ, ಶರಣ ಬಸವರಾಜ ಧನ್ನೂರು, ಡಾ.ದೇವರಾಜ ಬಿ. ಶರಣ ಶಿವಶಂಕರ ಚಿಮಕೋಡೆ, ಶರಣ ಗೌರೀಶ ಎಸ್.ಖಾಶಂಪೂರ, ಶರಣ ಕೇಶವರಾವ ಹೆಚ್. ಶ್ರೀಂಮಾಳೆ, ಶರಣೆ ವಿದ್ಯಾವತಿ ವಿಶ್ವನಾಥಪ್ಪ ಸಜ್ಜನಶೆಟ್ಟಿ, ಶರಣೆ ಲಲಿತಾಬಾಯಿ ಶಿವರಾಜ ಪ್ರಭಾ,
ಶರಣ ಮಲ್ಲಿಕಾರ್ಜುನ ರಡ್ಡೆರ್, ಶರಣ ರೇವಣಪ್ಪ ಮಹಾಜನ, ಶರಣ ಸಿದ್ಧರಾಮಪ್ಪ ಕಪಲಾಪೂರೆ,
ಕು.ಸಿದ್ಧರಾಮೇಶ್ವರ ಸಂಗಮೇಶ ವಾಲೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ಕೃಷಿಕರ ನೂರೆಂಟು ಸಮಸ್ಯೆಗಳ ಪರಿಹಾರಕ್ಕೆ ‘ರೈತ ನ್ಯಾಯ ಮಂಡಳಿ’ ರಚನೆಯ ಅತ್ಯವಶ್ಯಕತೆ

ಮೇಲೆ ಕಾಣಿಸಿದ ಗೌರವ ಸನ್ಮಾನವನ್ನು ೨೦೨೨ ಏಪ್ರಿಲ್ ೨೧ ಮತ್ತು ೨೨ ರಂದು ನಡೆಯುವ ವಚನ ಜಾತ್ರೆ-೨೦೨೨ ಮತ್ತು ಡಾ.ಚನ್ನಬಸವ ಪಟ್ಟದ್ದೇವರ ೨೩ನೆಯ ಸ್ಮರಣೋತ್ಸವ ಸಮಾರಂಭದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಜೆಡಿಎಸ್, ಬಿಜೆಪಿ ಬೀ ಟೀಮ್ ಎಂಬ ಆರೋಪಕ್ಕೆ ಹೆಚ್ಡಿಕೆ ಪಲಟ್ ವಾರ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here