ವೀರ ವೀರಾಗಿಣಿ ಅಕ್ಕಮಹಾದೇವಿ ಜಯಂತಿ ಆಚರಣೆ

0
9

ಭಾಲ್ಕಿ: ಪಟ್ಟಣದ ಚನ್ನಬಸವಾಶ್ರಮದಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ ಮಾಡಲಾಯಿತು. ಸಮಾರಂಭದ ದಿವ್ಯ ಸನ್ನಿಧಾನವಹಿಸಿದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದರು.

ಅಕ್ಕಮಹಾದೇವಿ ಜಗತ್ತು ಕಂಡ ಮಹಾನ್ ವೈರಾಗ್ಯ ನಿಧಿ. ಬಸವಾದಿ ಶರಣರ ಸಂಕುಲದಲ್ಲಿ ಅನುಭಾವದ ಎತ್ತರವನ್ನು ಏರಿದ ಮಹಾನುಭಾವಿ. ಇವರ ಜೀವನ ವ್ಯಕ್ತಿತ್ವ ಇಡೀ ಸ್ತ್ರೀಕುಲಕ್ಕೆ ಮಾದರಿಯಾಗಿದೆ. ಅದಕ್ಕಾಗಿಯೆ ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಅಕ್ಕಮಹಾದೇವಿ ಹೆಸರಿನ ಮೇಲೆ ಶಾಲೆ ಮತ್ತು ಕಾಲೇಜುಗಳು ಪ್ರಾರಂಭಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ಹೊನ್ನ ಕಿರಣಗಿಯಲ್ಲಿ ಜಂಗಮ ವಟುಗಳಿಗೆ ಹದಿನಾಲ್ಕನೇ ವರ್ಷದ ಸಂಸ್ಕಾರ ಶಿಬಿರ

ಅಕ್ಕಮಹಾದೇವಿಯವರ ಐಕ್ಯಸ್ಥಲವಾಗಿರುವ ಕದಳಿ ವನದಲ್ಲಿ ಅವರ ಮೂರ್ತಿಯನ್ನು ಸ್ಥಾಪನೆ ಮಾಡಿದರು. ಮಹಿಳೆಯರ ಸರ್ವಾಂಗೀಣ ಅಭಿವೃಧ್ಧಿಗಾಗಿ ಅಕ್ಕನ ಬಳಗವನ್ನು ಕಟ್ಟಿದರು. ಅಕ್ಕನ ಜೀವನ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವು ನಮ್ಮ ಜೀವನ ಸುಖಿ ಮತ್ತು ಸಮಾಧಾನಿ ಮಾಡಿಕೊಳ್ಳಬೇಕು ಎಂದು ನುಡಿದರು.

ಸಮಾರಂಭದ ಉದ್ಘಾಟನೆಯನ್ನು ಭಾಲ್ಕಿ ತಹಸೀಲ್ದಾರರಾದ ಶರಣೆ ಕೀರ್ತಿ ಚಾಲಕ ಅವರು ನೇರವೇರಿಸಿ ಅಕ್ಕಮಹಾದೇವಿ ಸ್ತ್ರೀ ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸಿದ ಧೀರ ವೀರ ಶರಣೆ. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಸ್ತ್ರೀಯರಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ನೀಡಿದರು. ಆ ಒಂದು ಚಳುವಳಿಯಲ್ಲಿ ಅಕ್ಕಮಹಾದೇವಿ ಒಬ್ಬ ಆದರ್ಶ ಮಹಿಳೆಯೆಂದೇ ಹೇಳಬೇಕು. ಅಧ್ಯಕ್ಷತೆಯನ್ನು ಶರಣೆ ಅಶ್ವಿನಿ ಶರಣು ಅಷ್ಟೂರೆ ಇವರು ವಹಿಸಿ ಅಕ್ಕಮಹಾದೇವಿಯ ವಚನಗಳನ್ನು ನಮಗೆ ಬದುಕುವ ಕಲೆಯನ್ನು ತೋರಿಸುತ್ತವೆ ಎಂದು ನುಡಿದರು.

ಇದನ್ನೂ ಓದಿ: ಜೆಡಿಎಸ್, ಬಿಜೆಪಿ ಬೀ ಟೀಮ್ ಎಂಬ ಆರೋಪಕ್ಕೆ ಹೆಚ್ಡಿಕೆ ಪಲಟ್ ವಾರ್

ಡಾ.ದೇವಕಿ ಡಾ.ಅಶೋಕ ನಾಗೂರೆ ಇವರು ತಮ್ಮ ಉಪನ್ಯಾಸದಲ್ಲಿ ಅಕ್ಕಮಹಾದೇವಿ ತಾಯಿಯವರ ಸಮಗ್ರ ಜೀವನ ಮತ್ತು ಸಾಧನೆ ವಿವರವಾಗಿ ತಿಳಿಸಿದರು. ಅವರ ವಚನಗಳಲ್ಲಿ ಅಡಗಿರುವ ಸಂದೇಶವನ್ನು ಮನಮುಟ್ಟುವ ಹಾಗೆ ಹೇಳಿದರು. ಮುಖ್ಯ ಅತಿಥಿಗಳಾಗಿ ಪೂಜ್ಯ ಶ್ರೀ ಟಿ.ಎಂ.ಪಂಚಾಕ್ಷರಿ ಸ್ವಾಮಿಗಳು ಉಪಸ್ಥಿತರಿದ್ದರು.

ಸುಶೀಲಾಬಾಯಿ ಕಾಶ್ಪಪ ಖಂಡ್ರೆ ಬಸವಗುರುಪೂಜೆ ನೆರವೇರಸಿದರು. ಶರಣೆ ಚಂದ್ರಕಲಾ ಪ್ರಭು ಡಿಗ್ಗೆ ಸ್ವಾಗತಿಸಿದರು. ಅಕ್ಕನಬಳಗದ ತಾಯಂದಿರಿಂದ ತೊಟ್ಟಿಲು ಕಾರ್ಯಕ್ರಮ ನೆರವೇರಿತು. ತೊಟ್ಟಿಲು ಗೀತೆಯನ್ನು ಮಲ್ಲಮ್ಮ ಆರ್.ಪಾಟೀಲ ಹಾಡಿದರು. ಸುರೇಖಾ ಬೇಲೂರೆ ವಚನ ಸಂಗೀತ ನಡೆಸಿಕೊಟ್ಟರು. ಪ್ರೇಮಲತಾ ಶಿವರುದ್ರಯ್ಯ ಸ್ವಾಮಿ ಶರಣು ಸಮರ್ಪಣೆ ಮಾಡಿದರು. ಸವಿತಾ ಭೂರೆ ನಿರೂಪಿಸಿದರು.

ಇದನ್ನೂ ಓದಿ:ರಸ್ತೆ ಅಭಿವೃದ್ಧಿಯ ಧೂಳು: ಎಐಡಿವೈಒ ಆಕ್ರೋಶ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here