ಕೆ.ಜಿ.ಎಫ್ ಬಾಬು ಅವರಿಂದ ಬಡ ಕುಟುಂಬಗಳಿಗೆ ಧನ ಸಹಾಯ

0
7

ಸುರಪುರ: ಬೆಂಗಳೂರಿನ ಪ್ರತಿಷ್ಠಿತ ಗುತ್ತಿಗೆದಾರ ಹಾಗೂ ಉದ್ಯಮಿ ಕೆ.ಜಿ.ಎಫ್ ಬಾಬು ಅವರು ರಂಗಂಪೇಟೆಯ ಬಡ ಮುಸ್ಲಿಂ ಸಮುದಾಯದ ಕುಟುಂಬಗಳಿಗೆ ತಲಾ ೧೫ ಸಾವಿರ ರೂಪಾಯಿಗಳ ಧನ ಸಹಾಯ ಮಾಡುವ ಮೂಲಕ ರಂಜಾನ್ ಹಬ್ಬ ಆಚರಣೆಗೆ ನೆರವಾಗಿದ್ದಾರೆ ಎಂದು ಯುವ ಮುಖಂಡ ಸಯ್ಯದ್ ಸಮೀರ್ ಸಾಹೇಬ್ ತಿಳಿಸಿದರು.

ಇದನ್ನೂ ಓದಿ: ದಿನಸಿ ಅಂಗಡಿಯಲ್ಲಿ ಅಗ್ನಿ ಅವಘಡ: 43 ಲಕ್ಷ ವಸ್ತು ಹಾನಿ

Contact Your\'s Advertisement; 9902492681

ರಂಗಂಪೇಟೆಯಲ್ಲಿನ ಬಡ ಕುಟುಂಬಗಳಿಗೆ ಕೆ.ಜಿ.ಎಫ್ ಬಾಬು ಅವರು ಮಾಡಿದ್ದ ಧನ ಸಹಾಯದ ಚೆಕ್‌ಗಳನ್ನು ವಿತರಿಸಿ ಮಾತನಾಡಿ,ಮುಸ್ಲಿಂ ಸಮುದಾಯದ ದೊಡ್ಡ ಹಬ್ಬವಾಗಿರುವ ರಂಜಾನ್ ಹಬ್ಬವನ್ನು ಎಲ್ಲ ಮುಸ್ಲಿಂ ಬಾಂಧವರು ಆಚರಣೆ ಮಾಡಬೇಕೆಂಬ ಉದ್ದೇಶದಿಂದ ಕೆಜಿಎಫ್ ಬಾಬು ಅವರು ಕಳುಹಿಸಿದ್ದ ಹಣವನ್ನು ಇಲ್ಲಿಯ ಬಡ ೧೨ ಕುಟುಂಬಗಳಿಗೆ ತಲಾ ೧೫ ಸಾವಿರ ರೂಪಾಯಿಗಳ ಚೆಕ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ನಂತರ ಎಲ್ಲಾ ಆಯ್ದ ಬಡ ಕುಟುಂಬಗಳಿಗೆ ಚೆಕ್‌ಗಳನ್ನು ವಿತರಿಸಿದರು.ಸಯ್ಯದ್ ಅಲಿ,ರಷೀದ್ ಬೇಗ್,ಅಬುಬಕ್ಕರ್,ಖಾಜಾ ಮೈನೊದ್ದಿನ್ ಸೇರಿದಂತೆ ಅನೇಕರಿದ್ದರು.

ಇದನ್ನೂ ಓದಿ: ಡಿಜೆ ಬಾಯ್ಸ್ ಸಂಘದ ಯುವಕರಿಂದ ಜಾತ್ರೆಯಲ್ಲಿ ಪುನಿತ್ ಭಾವಚಿತ್ರ ಮೆರವಣಿಗೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here