ಬಿಎಸ್ಪಿ ಪಕ್ಷದಿಂದ ಶಾಸಕ ಮಹೇಶ್ ಅವರಿಗೆ ತೆಗೆದುಹಾಕಲಾಗಿದೆ: ಬಿಎಸ್ಪಿ ನಾಯಕಿ ಮಾಯಾವತಿ

0
231

ಬೆಂಗಳೂರು: ಇಂದು ವಿಧಾನ ಸಭೆಯಲ್ಲಿ ಮೈತ್ರಿ ಸರಕಾರ ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಬಿ.ಎಸ್.ಪಿ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ರಾಜ್ಯದ ಬಿಎಸ್.ಪಿ ಶಾಸಕ ಮಹೇಶ್ ಅವರಿಗೆ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

Contact Your\'s Advertisement; 9902492681

ಮಾಯಾವತಿ ಅವರು ತಮ್ಮ ಟ್ವೀಟ್ ನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ, ಕುಮಾರಸ್ವಾಮಿ ಪರ ಮತ ಚಲಾವಣೆಗೆ ಮಹೇಶ್ ಅವರಿಗೆ ಸೂಚನೆ ನೀಡಿತ್ತು. ಆದರೆ ಅವರು ವಿಧಾನ ಸಭೆ ವಿಶ್ವಾಸ  ಮತ ಯಾಚನೆ ಸಂದರ್ಭದಲ್ಲಿ ಗೈರು ಹಾಜರಾಗಿದ್ದು, ಹೈಕಮಾಂಡ್ ಅವರ ಆದೇಶ ಉಲ್ಲಂಘನೆ ಮಾಡಿದ್ದಾರೆಂದು ಅವರು ತಿಳಿಸಿ, ಪಕ್ಷ ಮಹೇಶ್ ಅವರ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿ ತಾತ್ಕಾಲಿಕವಾಗಿ ಅವರಿಗೆ ಪಕ್ಷದಿಂದ ತೆಗೆದುಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here