ಬುದ್ಧ, ಬಸವ, ಅಂಬೇಡ್ಕರ್ ತತ್ವ ಪಾಲನೆಗೆ ಪ್ರಿಯಾಂಕ್ ಖರ್ಗೆ ಕರೆ

0
12

ಕಲಬುರಗಿ: ಬುದ್ದ‌ ಬಸವ ಅಂಬೇಡ್ಕರ ಬೇಕು ಆದರೆ ಅವರ ತತ್ವಗಳು ಬೇಡವಾಗಿದೆ. ಇದನ್ನು‌ ಗಮನಿಸಿದರೆ, ಸಮಾಜಿಕವಾಗಿ ನಾವು ದಾರಿತಪ್ಪಿದ್ದೇವೆ ಎನಿಸುತ್ತಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ವಿಷಾದಿಸಿದರು.

ಕಾಳಗಿ‌ ಪಟ್ಟಣದಲ್ಲಿ ನಡೆದ ಡಾ ಅಂಬೇಡ್ಕರ ಅವರ 131 ನೆಯ ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಬಾಬಾಸಾಹೇಬರು ವ್ಯಕ್ತಿ ಪೂಜೆಯನ್ನು ವಿರೋಧಿಸಿದ್ದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವ್ಯಕ್ತಿ ಪೂಜೆ‌ ನಡೆದಾಗ ಆತ ಸರ್ವಾಧಿಕಾರಿ‌ ಆಗುತ್ತಾನೆ. ಆಗ ಪ್ರಜೆಗಳ ಕೆಲಸ ಆಗುವುದಿಲ್ಲ. ಹಾಗಾಗಿ‌ ನೀವು ಅಂಬೇಡ್ಕರ ಅವರ ತತ್ವ ಪಾಲನೆ ಮಾಡುವುದಿದ್ದರೆ ವ್ಯಕ್ತಿ ಪೂಜೆ ವರ್ಜಿಸಿ. ಜನಪ್ರತಿನಿಧಿಗಳ ಹಾರ ತುರಾಯಿ ಹಾಕಿ ಮೆರವಣಿಗೆ ಮಾಡಬೇಡಿ ಎಂದು ಮನವಿ ಮಾಡಿದರು.

ಸಂವಿಧಾನದ ಶ್ರೇಷ್ಟತೆಯನ್ನು ಹೊಗಳಿದ ಶಾಸಕರು ಬಾಬಾಸಾಹೇಬರು ರಚಿಸಿದ ಸಂವಿಧಾನದಲ್ಲಿ ಸರ್ವರಿಗೆ ಸಮಪಾಲು ಸಮಬಾಳು ಎನ್ನುವ ಬುದ್ದನ ಬಸವಣ್ಣನ ತತ್ವ ಅಡಗಿದೆ ಎಂದರು. ” ಡಾ ಬಾಬಾಸಾಹೇಬರು ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದು ಕೋಲಂಬಿಯಾ ಯೂನಿವರ್ಸಿಟಿ ಹಾಗೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡಿದ್ದಾರೆ. ಅವರ 125 ನೆಯ ಜಯಂತಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ರೂ 128 ಕೋಟಿ ಖರ್ಚಿನಲ್ಲಿ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಮಾದರಿಯ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದೆ ” ಎಂದು ತಾವು ಸಮಾಜಕಲ್ಯಾಣ ಸಚಿವರಾಗಿದ್ದ ಕೈಗೊಂಡ ಕಾರ್ಯಕ್ರಮದ ಬಗ್ಗೆ ನೆನಪಿಸಿಕೊಂಡರು.

ಭಾರತ ಸಶಕ್ತವಾಗಿ‌ ಉಳಿದಿರೋದು ಭಗವಗ್ದೀತೆ, ‌ ಕುರಾನ್ ಅಥವಾ ಬೈಬಲ್‌ನಿಂದಾಗಿ ಅಲ್ಲ ಅದು ಸಂವಿಧಾನದಿಂದ ಮಾತ್ರ ಎಂದು‌ ಹೇಳಿದ ಖರ್ಗೆ ಅವರು ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮ ಧರ್ಮದ ನಡುವೆ ಜಗಳ ಹಚ್ಚಿ‌ ಕೋಮು ದ್ವೇಷ ಬೆಳೆಸುತ್ತಿರುವವರನ್ನ ಬಾಬಾಸಾಹೇಬರು ದೇಶದ್ರೋಹಿಗಳು ಎಂದು ಕರೆದಿದ್ದಾರೆ ಎಂದರು.

ಬಿಜೆಪಿಯವರು ಬಡವರ ಮಕ್ಕಳ ಕೊರಳಿಗೆ ಕೇಸರಿ ಶಾಲು ಹಾಕಿಸಿ ಧರ್ಮದ‌ ಹೆಸರಿನಲ್ಲಿ ಅವರನ್ನು ಬಳಸಿಕೊಳ್ಳುತ್ತಾರೆ. ಇದರಿಂದ ಈಗಿನ ಯುವಕರು ಎಚ್ಚರದಿಂದರಬೇಕು ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here