ಆಳಂದ: ತಾಲೂಕಿನ ಬಂಗರಗಾ ಗ್ರಾಮದ ಅನೇಕರು ಶಾಸಕ ಸುಭಾಷ್ ಆರ್ ಗುತ್ತೇದಾರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಗ್ರಾ.ಪಂ ಸದಸ್ಯ ಶ್ರೀಶೈಲ ಪಾಟೀಲ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಪಕ್ಷದ ಧ್ವಜವನ್ನು ನೀಡಿ ಬರ ಮಾಡಿಕೊಂಡರು. ಶ್ರೀಶೈಲ ಪಾಟೀಲ ಅವರು ಆಳಂದ ಪಟ್ಟಣದ ಖ್ಯಾತ ಉದ್ದಿಮೆದಾರರಾಗಿದ್ದ ದಿ. ವಿ ಡಿ ಪಾಟೀಲ ಅವರ ಸಹೋದರರಾಗಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ ಭೂಸಣುಗೆ, ಮುಖಂಡರಾದ ಮಲ್ಲಿಕಾರ್ಜುನ ಕಂದಗೂಳೆ, ಸುಭಾಷ್ ಚಿಚಕೋಟೆ, ವೈಜನಾಥ ಜಿಡಗೆ, ಬಸವರಾಜ ಮೂಲಗೆ, ಶ್ರೀಶೈಲ ಚಿತಕೋಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.