1 ಕೋಟಿ ಅನುದಾನಕ್ಕೆ : ಲಕ್ಷ್ಮಣ ಮೂಲಭಾರತಿ ಹರ್ಷ

0
9

ಕಲಬುರಗಿ: ನಗರದ ಹೃದಯಭಾಗ ಜಗತ ವೃತ್ತದಲ್ಲಿರುವ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ ಪುತ್ಥಳಿ ಆವರಣ ಹಾಗೂ ಸೌಂದರ್ಯಕರಣಕ್ಕೆ ಕೆ.ಕೆ.ಆರ್.ಡಿ.ಬಿ.ಯಿಂದ 2020-21ನೇ ಸಾಲಿನ ಅಧ್ಯಕ್ಷರು ವಿವೇಚನ ನಿಧಿ ಅಡಿಯಲ್ಲಿ ರೂ .30.00 ಹಾಗೂ ಮೈಕ್ರೋ ನಿಧಿ ಅಡಿಯಲ್ಲಿ ರೂ.70.00 ಲಕ್ಷ ಹೀಗೆ ಒಟ್ಟು ಸುಮಾರು ರೂ.1.00 ಕೋಟಿ ಅನುದಾನವನ್ನು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು ಹಾಗೂ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಒದಗಿಸಿದ್ದು ಎಲ್ಲಾ ಬಾಬಾ ಸಾಹೇಬ ಅಂಬೇಡ್ಕರ ಅನುಯಾಯಿಗಳಿಗೆ ಅತ್ಯಂತ ಸಂತೋಷದ ವಿಷಯವಾಗಿದೆ. ಎಂದು ದಿ. ಚಮದ್ರಶೇಖರ ಪಾಟೀಲ ರೇವೂರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ ಮೂಲಭಾರತಿ ಪ್ರಕಟಣೆ ಮೂಲಕ ಹೇಳಿದರು.

ಅಲ್ಲದೇ ಸುಂದರ ನಗರ ಬಡಾವಣೆಯ ಅಭಿವೃದ್ಧಿಗಾಗಿ ನೂತನ ಶಾಲಾ ನಿರ್ಮಾಣಕ್ಕೆ ಈಗಾಗಲೇ ರೂ.40.80 ಲಕ್ಷ ಮತ್ತು ಶುದ್ಧ ನೀರು ಘಟಕ್ಕೆ ರೂ.10.00 ಲಕ್ಷಗಳನ್ನು ಮಂಜೂರು ಮಾಡಿರುತ್ತಾರೆ. ಹಾಗೆ ನಮ್ಮ ಸುಂದರ ನಗರ ಮುಖ್ಯದ್ವಾರಕ್ಕೆ ಸ್ವಾಂಚಿದ್ವಾರ ನಿರ್ಮಾಣಕ್ಕೆ ರೂ.15.65 ಲಕ್ಷಗಳು ಅಂದಾಜು ಮಾಡಲಾಗಿದೆ.

Contact Your\'s Advertisement; 9902492681

ಎಲ್ಲಾ ಬಾಬಾ ಸಾಹೇಬ ಅಂಬೇಡ್ಕರ ರವರ ಅನುಯಾಯಿಗಳು ಹಾಗೂ ಅಭಿಮಾನಿಗಳು ಮತ್ತು ಬಡಾವಣೆಯ ಜನರ ಪರವಾಗಿ ಲಕ್ಷ್ಮಣ ಮೂಲ ಭಾರತಿ ಅವರು ಶಾಸಕರಿಗೆ ಹರ್ಷ ಮತ್ತು ಧನ್ಯವಾದಗಳು ಅರ್ಪಿಸಿದ್ದಾರೆ. ಎಂದು ಪ್ರಕಟಣೆಯಲ್ಲಿ ಸಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here