ಕರ್ನಾಟಕ ಜಾನಪದ ಪರಿಷತ್ತು ಪದಾಧಿಕಾರಿಗಳ ನೇಮಕ

0
203

ಕಲಬುರಗಿ: ಜಿಲ್ಲೆಯ ಕರ್ನಾಟಕ ಜಾನಪದ ಪರಿಷತ್ತಿನ ನೂತನ ಪದಾಧಿಕಾರಿಗಳ ನೇಮಕ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಯಾಗಿ ಬಾಬು ಎಂ ಜಾಧವ, ಸಂಘಟನಾ ಕಾರ್ಯದರ್ಶಿಯಾಗಿ ಉಪನ್ಯಾಸಕರಾದ ಡಿ.ಪಿ.ಸಜ್ಜನ, ಕಾರ್ಯದರ್ಶಿ ಮಲ್ಲಿಕಾರ್ಜುನ ರೋಣದ, ಖಜಾಂಕ್ಷಿ ಭಾನುಕುಮಾರ ಗಿರೇಗೋಳ್ ಹಾಗೂ ಸದಸ್ಯರುಗಳಾದ ಡಾ.ವಿಶಾಲಾಕ್ಷೀ.ವಿ.ಕರೆಡ್ಡಿ, ರಾಜಶೇಖರ ಸಿರಗುರ, ಕೆ.ಎಸ್.ಲಗಶೆಟ್ಟಿ, ಮಹಾನಂದ ಪತ್ತಾರ, ಸಿದ್ದಾರ್ಥ ಚಿಮ್ಮಾ ಇದಲಾಯಿ, ಗುಂಡಪ್ಪ ಗೋಟೂರು ಅವರನ್ನು ನೇಮಕ ಮಾಡಲಾಗಿದೆ. ನಮ್ಮ ನಡೆ ಗ್ರಾಮೀಣದ ಕಡೆ ಜಾನಪದ ತಂಡಗಳನ್ನು, ಕಲಾವಿದರನ್ನು, ತಜ್ಞರನ್ನು, ಸಾಹಿತ್ಯಾಸಕ್ತರನ್ನು, ಚಿಂತಕರನ್ನು ಗುರುತಿಸಲು ಮುಂದೆ ಸಾಗಬೇಕಿದೆ, ಸುಮಾರು ೧೨ ವರ್ಷಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಪ್ರಾರಂಭವಾಗಿದ್ದು ರಾಜ್ಯಾಧ್ಯಕ್ಷರಾದ ಟಿ.ತಿಮ್ಮೇಗೌಡರವರ ಆದೇಶದ ಮೇರೆಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ನಾಡು ನುಡಿಗೆ ಸೇವೆ ಸಲ್ಲಿಸುವ ಮಹದಾಸೆ ಹೊಂದಿದೆ ಎಂದು ಕಲಬುರಗಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಸಿ.ಎಸ್.ಮಾಲಿಪಾಟೀ ಅವರು ಪ್ರತಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here