ತಳಿರು, ತೋರಣಗಳನ್ನು ಕಟ್ಟಿ ಶಾಲಾ ಮಕ್ಕಳಿಗೆ ಬರಮಾಡಿಕೊಂಡ ಶಿಕ್ಷಕ ವರ್ಗ

0
42

ಶಹಾಬಾದ: ರಜೆಯ ಮಜಾ ಕಳೆದ ಮಕ್ಕಳನ್ನು ಮತ್ತೆ ಶಾಲೆಗೆ ಸೆಳೆಯುವ ನಿಟ್ಟಿನಲ್ಲಿ ಪ್ರಾರಂಭೋತ್ಸವದ ದಿನವಾದ ಸೋಮವಾರದಂದು ಶಾಲೆಗಳ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ತಳಿರು, ತೋರಣಗಳನ್ನು ಕಟ್ಟಿ, ರಂಗೋಲಿ ಹಾಕಿ ಸಿಂಗರಿಸಿ, ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಮೂಲಕ ಬರಮಾಡಿಕೊಂಡರು.

ಇದನ್ನೂ ಓದಿ: ಮಕ್ಕಳಿಗೆ ಸರಿಯಾದ ಹಾಕಬೇಕಾಗಿರುವುದು ಶಿಕ್ಷಕರ ಕರ್ತವ್ಯ: ಕರಣಿಕ್

Contact Your\'s Advertisement; 9902492681

ತಾಲೂಕಿನ ಪ್ರತಿ ಶಾಲೆಯ ಆವರಣಗಳಲ್ಲಿ ಹಬ್ಬದ ವಾತಾವರಣ ಕಂಡುಬಂತು.ಶಿಕ್ಷಣ ಇಲಾಖೆಯ ಆದೇಶದಂತೆ ಶಾಲೆ ಸ್ವಚ್ಛಗೊಳಿಸುವುದು, ನೀರಿನ ವ್ಯವಸ್ಥೆ ಇತರೆ ಪೂರ್ವಸಿದ್ಧತೆ ಕಾರ್ಯವನ್ನು ಪೂರ್ಣಗೊಳಿಸಲಾಗಿತ್ತು. ಶಾಲೆಗೆ ಪ್ರವೇಶಿಸುವ ವಿದ್ಯಾರ್ಥಿಗಳಲ್ಲಿ ಮೊದಲ ದಿನ ಸಕಾರಾತ್ಮಕ ಭಾವನೆ ಮೂಡಿಸುವ ಉದ್ದೇಶದಿಂದ ಅಗತ್ಯ ಶಾಲಾ ಆವರಣ ಸಿಂಗರಿಸಿ, ಶಿಕ್ಷಕರು ಮಕ್ಕಳಿಗೆ ಆತಸ್ಥೈರ್ಯ ತುಂಬಿದರು.ಅಲ್ಲದೇ ಸಿಹಿ ತಿಂಡಿ ತಿನಿಸಿ ಪ್ರತಿನಿತ್ಯ ಶಾಲೆಗೆ ಬರುವಂತೆ ತಿಳಿಸಿದರು.

ಇದನ್ನೂ ಓದಿ: ‘ಬುದ್ಧ ಪೂರ್ಣಿಮೆ ದಿನದಂದು ಕಾವ್ಯ ಪೂರ್ಣಿಮೆ’

ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಯ ಮಕ್ಕಳು ಶಾಲೆಯ ಕಡೆಗೆ ಮುಖ ಮಾಡುತ್ತಿರುವುದು ಕಂಡುಬಂತು. ಶಾಲಾ ಪ್ರಾರಂಭದ ದಿನವಾಗಿದ್ದರಿಂದ ಮಕ್ಕಳ ಸಂಖ್ಯೆ ಕಡಿಮೆಯಾದರೂ,ಶಾಲೆ ಪ್ರಾರಂಭವಾಗಿದ್ದು ಮಾತ್ರ ಶಿಕ್ಷಕ ವರ್ಗದಲ್ಲಿ ಹಾಗೂ ಪೋಷಕರಲ್ಲಿ ಸಂತೋಷ ಉಂಟು ಮಾಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here