ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ 90ನೇ ಹುಟ್ಟುಹಬ್ಬದ ಪ್ರಯುಕ್ತ ಕ್ರಿಕೆಟ್ ಪಂದ್ಯ

0
13

ಬೆಂಗಳೂರು: ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರ 90ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಇಂದು ಸ್ವತಃ ಮಾಜಿ ಪ್ರಧಾನಮಂತ್ರಿಗಳೇ ಬಹುಮಾನ ವಿತರಣೆ ಮಾಡಿದರು.

ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್.ಮಂಜುನಾಥ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ “ಮಣ್ಣಿನ ಮಗ ಚಾಂಪಿಯನ್ಸ್ ಟ್ರೋಫಿ” ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ “ಧಣಿ ಜಗದೀಶ್ ಲೈನ್ಸ್ ” ತಂಡಕ್ಕೆ 5 ಲಕ್ಷದ ಚೆಕ್ ಹಾಗೂ ಟ್ರೋಫಿಯನ್ನು ದೇವೇಗೌಡರು ವಿತರಿಸಿದರು.

Contact Your\'s Advertisement; 9902492681

ಟೀಮ್ ಆರ್.ಎಂ.ಎನ್, ಯುವ ಜನತಾದಳ, ವಿದ್ಯಾರ್ಥಿ ಜನತಾದಳ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಎಲ್ಲಾ ಯುವ ಮುಖಂಡರು ಹಾಗೂ ನಾಯಕರು ಈ ಪಂದ್ಯಾವಳಿ ಆಯೋಜನೆಯಲ್ಲಿ ಶ್ರಮಿಸಿದ್ದರು.

ಪ್ರಶಸ್ತಿ ವಿತರಿಸಿದ ಮಾಜಿ ಪ್ರಧಾನಿಗಳು, ವಿಜೇತ ತಂಡಕ್ಕೆ ಶುಭ ಕೋರಿದರು. ಜೀವನದಲ್ಲಿಯೂ ಕ್ರೀಡಾಸ್ಪೂರ್ತಿ ಬೆಳೆಸಿಕೊಳ್ಳುವಂತೆ ಅವರು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕಿರಣ್ ಮಂಜುನಾಥ್, ಬಿ.ಎನ್. ಜಗದೀಶ್, ಚಂದನ್ ದೊರೆ, ನಂದ ಗೌಡ, ತಮಣ್ಣ, ಬಲರಾಮ್, ಮಲ್ಲೇಶ್ ಗೌಡ, ಮಂಜೇಶ್ ಮುಂತಾದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here