ಸರಕಾರ ಕಲ್ಯಾಣ ಕರ್ನಾಟಕದವರನ್ನು ಎರಡನೇ ದರ್ಜೆ ನಾಗರೀಕರಂತೆ ಕಾಣುತ್ತಿದೆ: ಈಶ್ವರ ಖಂಡ್ರೆ

0
55

ಕಲಬುರಗಿ: ಸರಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಘನಘೋರ ಅನ್ಯಾಯ ಮಾಡುತ್ತಲ್ಲೇ ಬಂದಿದೆ. ನೇಮಕಾತಿಯಲ್ಲೂ ಅನ್ಯಾಯ, ಅನುದಾನದಲ್ಲಿಯೂ ಅನ್ಯಾಯ, ಅಭಿವೃದ್ಧಿಯಲ್ಲೂ ಅನ್ಯಾಯ ಮಾಡುವ ಮೂಲಕ ಕೆ.ಕೆ ಪ್ರದೇಶಕ್ಕೆ ನಿರ್ಲಕ್ಷ ತೋರಿ ಎರಡನೇ ದರ್ಜೆ ನಾಗರೀಕರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಅವರು ಆರೋಪಿಸಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ 2019 20 ನೇ ಸಾಲಿನ ಎಫ್.ಡಿ.ಎ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದ 105 ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಎಫ್.ಡಿ.ಎ ಸ್ಪರ್ಧಾರ್ಥಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಸಾಥ್ ನೀಡಿ ಅವರು ಮಾತನಾಡಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾವಂತ ಅಭ್ಯರ್ಥಿಗಳು ಸರಕಾರದ ವಿವಿಧ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳಿಗಾಗಿ ಸಾಕಷ್ಟು ತಯಾರಿ ನಡೆಸಿ ಸತತ ಪ್ರಯತ್ನ ಪಡುತ್ತಿದ್ದಾರೆ. ಸರಕಾರ ಸದನದಲ್ಲಿ ಒಂದು ಲೆಕ್ಕಾ ಹೇಳುತ್ತೆ. ಹೊರಗಡೆ ಮತ್ತೊಂದು ಲೆಕ್ಕಾ ತೋರಿಸುತ್ತಿದೆ. ನಿಜವಾದ ಅಂಕಿಅಂಶ ಹೊರಬರುತ್ತಿಲ್ಲ. ಆದರೆ, ಅಂದಾಜು ಪ್ರಕಾರ ಕರ್ನಾಟಕದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 50 ಸಾವಿರ ಹುದ್ದೆಗಳು ಖಾಲಿ ಇವೆ ಭರ್ತಿ ಮಾಡುವಲ್ಲಿ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.

ರಾಜ್ಯ ಸರಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರಕಾರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ 2020 ರ ಜನವರಿ 31 ರಂದು ಸುತ್ತೋಲೆ ಹೊರಡಿಸಿ ಈ ಭಾಗದ ಯುವಕರ ಭವಿಷ್ಯದ ಜತೆ ಆಟವಾಡುತ್ತಿದೆ. ಕೂಡಲೇ, 2020 ರ ಸುತ್ತೋಲೆ ಯನ್ನು ರದ್ದು ಪಡಿಸಿ, 2016 ರ ಸುತ್ತೋಲೆ ಪ್ರಕಾರವೇ ನೇಮಕಾತಿ ನಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಬಳಿಕ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, 371(ಜೆ) ಈ ಭಾಗದ ಬಹುದಿನದ ಅಸೆ ಆಗಿತ್ತು. ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂ ಸಿಂಗ್ ಅವರ ಪರಿಶ್ರಮದಿಂದ ಅದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನುಷ್ಠಾನಗೊಂಡರು. ಈಗಿನ ಸರಕಾರಕ್ಕೆ ಕಲ್ಯಾಣ ಕರ್ನಾಟಕ ಅಂದರೆ ಅಲರ್ಜಿ ಆಗಿದೆ. ಅಭಿವೃದ್ಧಿ ನಿಧಿ ಯಲ್ಲಿ ಮೋಸ, ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿಯೂ ಮೋಸ ಮಾಡುವುದಲ್ಲದೆ. ನೇಮಕಾತಿ, ಮುಂಬಡ್ತಿಯಲ್ಲಿ ಸಹ ಘೋರವಾದ ಅನ್ಯಾಯವಾಗುತ್ತಿದೆ ಎಂದು ಸರಕಾರದ ವಿರುದ್ಧ ಕಿಡಿಕಾರಿದರು.

ಕೇವಲ ಎಫ್. ಡಿ. ಎ ಅಷ್ಟೇ ಅಲ್ಲ, ಪಿಡಬ್ಲ್ಯೂಡಿ ಜೆಇ, ತೋಟಗಾರಿಕೆ, ಪಶುಸಂಗೋಪನೆ, ಪಿಎಸ್ಐ, ಪಿಸಿ ಸೇರಿ ಕಳೆದ ಮೂರು ವರ್ಷದಲ್ಲಿ ಯಾವೆಲ್ಲಾ ನೇಮಕಾತಿ ಪ್ರಕಟವಾಗಿದೆ ಅದರಲ್ಲಿ ಕಲ್ಯಾಣ ಕರ್ನಾಟಕದ ಯುವಕರಿಗೆ ಅನ್ಯಾಯವಾಗಿದೆ. ಹೀಗಾಗಿ ಅನ್ಯಾಯದ ವಿರುದ್ಧ ಹೊರಡಲು ಇತ್ತೀಚಿಗೆ ಅಭ್ಯರ್ಥಿಗಳು ಯಾವೆಲ್ಲಾ ಪರೀಕ್ಷೆಗಳು ಬರೆದಿದ್ದಾರೋ ಅವರೆಲ್ಲ ಬೆಂಗಳರಿನ ಮುಖ್ಯಮಂತ್ರಿ ಕಚೇರಿ ಹಾಗೂ ವಿಧಾನಸೌಧ ಬಳಿ ಹೋರಾಟಕ್ಕೆ ಕುಳಿತುಕೊಳ್ಳಬೇಕು. ಕಲ್ಯಾಣ ಕರ್ನಾಟಕದ ಎಲ್ಲಾ ಯುವಕರು ಬೆಂಗಳೂರಿನಲ್ಲಿ ಹೋರಾಟ ಮಾಡಲು ಸಿದ್ದರಾಗಿ ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಶರಣ ಪ್ರಕಾಶ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಕಾಳಗಿ, ಮಾಜಿ ವಿಧಾನ ಪರಿಷತ್ ಸದಸ್ಯರು ತಿಪ್ಪಣ್ಣ ಕಮಕನೂರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಮೋದಿ, ಜಿಲ್ಲೆಯ ಕಾಂಗ್ರೆಸ್ ಹಾಲಿ ಹಾಗೂ ಮಾಜಿ ಶಾಸಕರು, ಸಚಿವರು, ವಿಧಾನ ಪರಿಷತ್ ಸದಸ್ಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮಹಿಳೆಯರು, ಯುವಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here